ಕಾರ್ನಾಡ್ ಗೆ ಜ್ಞಾನಪೀಠ ಪ್ರಶಸ್ತಿ ಕೊಡಬಾರದಿತ್ತು; ಯತ್ನಾಳ್ ಆಕ್ರೋಶ
Team Udayavani, Nov 28, 2018, 6:59 PM IST
ವಿಜಯಪುರ: ಕಾದಂಬರಿಕಾರ ಗಿರೀಶ್ ಕಾರ್ನಾಡ್ ಗೆ ಜ್ಞಾನಪೀಠ ಪ್ರಶಸ್ತಿ ಕೊಡಬಾರದಿತ್ತು. ಕಾರ್ನಾಡ್ ಮತ್ತು ನಟ ಪ್ರಕಾಶ್ ರೈಗೆ ದೇಶದ್ರೋಹಿಗಳ ಬೆಂಬಲವಿದೆ ಎಂದು ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಗೋ ಮಾಂಸ ತಿಂದಿದ್ದರಿಂದಲೇ ಶಿಕ್ಷೆಯಾಗಿ ಕೇರಳಕ್ಕೆ ಪ್ರವಾಹಕ್ಕೆ ಬಂದಿದೆ, ರಾಹುಲ್ ಗಾಂಧಿ ಒಬ್ಬ ಹುಚ್ಚ ಹೀಗೆ ಸದಾ ಒಂದಿಲ್ಲಾ ಒಂದು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುವ ಯತ್ನಾಳ್ ಇದೀಗ ರೈ ಮತ್ತು ಕಾರ್ನಾಡ್ ವಿರುದ್ಧ ಗುಡುಗಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಬಹುಭಾಷಾ ನಟ ಪ್ರಕಾಶ್ ರೈ ಓರ್ವ ಕಳ್ಳ ಎಂದು ಆರೋಪಿಸಿದರು. ಕಾರ್ನಾಡ್ ಮತ್ತು ಪ್ರಕಾಶ್ ರೈ ನಗರ ನಕ್ಷಲರು ಎಂದು ಗಂಭೀರವಾಗಿ ದೂರಿದರು.
ಗಿರೀಶ್ ಕಾರ್ನಾಡ್ ಗೆ ಜ್ಞಾನಪೀಠ ಪ್ರಶಸ್ತಿ ಯಾಕೆ ಕೊಟ್ಟರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.