ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ; 10 ಮಂದಿಗೆ ಗೌರವ ಪ್ರಶಸ್ತಿ
Team Udayavani, Oct 1, 2022, 11:06 PM IST
ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2022ನೇ ಸಾಲಿನ “ಶಿಲ್ಪಶ್ರೀ ಪ್ರಶಸ್ತಿ’ಯನ್ನು ಶನಿವಾರ ಪ್ರಕಟಿಸಿದೆ.
ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ನೇತೃತ್ವದ ಕಾರ್ಯಕಾರಿ ಸಮಿತಿ ಒಟ್ಟು 10 ಮಂದಿ ಶಿಲ್ಪ ಸಾಧಕರನ್ನ ಪ್ರಶಸ್ತಿ ಆಯ್ಕೆ ಮಾಡಿದೆ. ಗದಗ ಜಿಲ್ಲೆಯ ರಾಘವೇಂದ್ರ ಎನ್., ಉಡುಪಿಯ ಕೆ. ಸತೀಶ್ ಆಚಾರ್ಯ, ವಿಜಯ ನಗರದ ಕೆ. ಸುರೇಶ್ ಆಚಾರ್ಯ, ಧಾರವಾಡದ ನಾಗೇಂದ್ರ ಎಸ್. ಕಮ್ಮಾರ, ಬೆಳಗಾವಿಯ ಅಶೋಕ್ ಆರ್. ಬಡಿಗೇರ್, ಬೆಂಗಳೂರಿನ ಜಿ.ವಿ. ಶಿವಕುಮಾರ್, ಯಾದಗಿರಿಯ ನಾಗರಾಜ ಬಿ. ಕಂಬಾರ, ಬಾಗಲಕೋಟೆಯ ವೀರೇಶ್ ಜಿ. ಮಾಯಚಾರ್ಯ, ಕಲಬುರಗಿಯ ನಿಂಗಪ್ಪ ಡಿ. ಕೇರಿ ಹಾಗೂ ಶಿವಮೊಗ್ಗದ ಡಿ.ಎನ್. ಚಂದ್ರಶೇಖರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದ ಅರ್ಕಸಾಲಿ ತಿಳಿಸಿದ್ದಾರೆ.
ಈ ಪ್ರಶಸ್ತಿ ತಲಾ 25 ಸಾವಿರ ರೂ. ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಅ.10ರಂದು ಸಂಜೆ 5 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.