ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
Team Udayavani, May 26, 2022, 12:24 AM IST
ಬೆಂಗಳೂರು: ಹೈನೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ನಿಯಮಿತ (ಕೆಎಂಎಫ್) ಇದೀಗ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಕಳೆದ ಮೇ 24ರಂದು 91.07 ಲಕ್ಷ ಕೆ.ಜಿ. ಗರಿಷ್ಠ ಪ್ರಮಾಣದ ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಹಾಲು ಶೇಖರಣೆ ಮಾಡುವ ಮೂಲಕ ಮತ್ತೂಂದು ಯಶೋಗಾಥೆ ಬರೆದಿದೆ.
ಈ ಹಿಂದೆ ಕೆಎಂಎಫ್ 2020ನೇ ಸಾಲಿನ ಜುಲೈ 14ರಂದು 88.30 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಣೆ ಮಾಡಿ ಮೊದಲ ಬಾರಿಗೆ ಹೊಸ ಮೈಲುಗಲ್ಲು ಸ್ಥಾಪಿಸಿತ್ತು. 2021ರ ಜೂ. 11ರಂದು 90.62 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಿಸಿ 2ನೇ ಬಾರಿ ಮೈಲಿಗಲ್ಲನ್ನು ಮೆರೆದಿತ್ತು. ಇದೀಗ 91.07 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲಿ ಮೂರನೇ ಬಾರಿ ಹೊಸ ದಾಖಲೆ ಬರೆದಿದೆ ಎಂದು ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ.
100 ಲಕ್ಷ ಕೆ.ಜಿ. ಗುರಿ
ಮುಂದಿ ದಿನಗಳಲ್ಲಿ ಸರಾಸರಿ ಲೆಕ್ಕಾಚಾರದಲ್ಲಿ ದಿನವಹಿ 100 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನ ವೇಗವನ್ನು ವೃದ್ಧಿಸಿಕೊಳ್ಳುವುದು ಕೆಎಂಎಫ್ನ ಗುರಿಯಾಗಿದೆ ಎಂದು ಬಿ.ಸಿ. ಸತೀಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಂ.ಸಿ ಸುಧಾಕರ್, ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕೆ.ಹೆಚ್ ಮುನಿಯಪ್ಪ ತೀವ್ರ ಅಸಮಾಧಾನ
ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್
ಉದಯಪುರ ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು: ಸಿಎಂ ಬೊಮ್ಮಾಯಿ
ರಾಷ್ಟ್ರೀಯ ಅಂಕಿಅಂಶ ದಿನ: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
MUST WATCH
ಹೊಸ ಸೇರ್ಪಡೆ
ಮಾಧ್ಯಮದ ಕಣ್ತಪ್ಪಿಸಿ ಬಂದ ಶಿವಸೇನೆಯ ಬಂಡಾಯ ಶಾಸಕರು
Social Media Day: ತುಸು ಹೆಚ್ಚು ಅಭಿವ್ಯಕ್ತಿಗೊಳ್ಳುವಂತೆ ಆಹ್ವಾನಿಸುತ್ತಿದೆ ‘ಕೂ’ ಅಭಿಯಾನ!
ಧಾರಾಕಾರ ಮಳೆ; ಬಂಟ್ವಾಳದಲ್ಲಿ ಅಪಾಯದ ಮಟ್ಟ ತಲುಪದ ನೇತ್ರಾವತಿ
ವಿಟ್ಲ: ಮಳೆ ಅಬ್ಬರ- ಹಲವು ಮನೆಗಳು ಜಲಾವೃತ-ಜನ ಜೀವನ ಅಸ್ತವ್ಯಸ್ತ
ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್ ಐಎ ತಂಡ