
ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ ಎಚ್ಚರಿಕೆ
Team Udayavani, Aug 16, 2022, 12:02 PM IST

ಬೆಂಗಳೂರು: ಪೊಲೀಸರು ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ . ನಿಮ್ಮ ಯುವಕರಿಗೆ ಬುದ್ದಿ ಹೇಳಿ, ಗೂಂಡಾಗಳಿಗೆ ತಿಳಿ ಹೇಳಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಕೆಲವು ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ತೆಗೆದು ಹಾಕಿದ್ದಾರೆ. ಅದಕ್ಕಿಂತ ಮುಂಚೆ ಒಬ್ಬ ಎಸ್ ಡಿಪಿಐ ಕಾರ್ಯಕರ್ತ ಆತನ ಪತ್ನಿ ಕಾರ್ಪೊರೇಟರ್ ಆತ ಸಹ ಸಾವರ್ಕರ್ ಫೋಟೋ ತೆಗೆದು ಹಾಕಿದ್ದಾನೆ. ಮತ್ತೊಮ್ಮೆ ಸಾವರ್ಕರ್ ಗೆ ಅವಮಾನ ಹಿನ್ನೆಲೆ ಶಿವಮೊಗ್ಗ ಪ್ರಕ್ಷುಬ್ಧವಾಯ್ತು. ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ ಎಂದು ಹೇಳಿದರು.
ಹಿಂದೂಗಳ ಮೇಲಿನ ಅವರ ಭಾವನೆ ಇನ್ನೂ ಬದಲಾಗಿಲ್ಲ. ಅವರ ಚಟುವಟಿಕೆ ಜಾಸ್ತಿಯಾಗಿದೆ, ಹೀಗಾಗಿ ಕೊಲೆ, ಗಲಭೆ ಹೆಚ್ಚಾಗಿದೆ. ಗಾಂಧಿ ಬಜಾರ್ ನಲ್ಲಿ ಅಂಗಡಿಗಳನ್ನು ಮುಚ್ಚುತ್ತಿದ್ದ ಪ್ರೇಮ್ ಕುಮಾರ್ ಮೇಲೆ ಆರು ಜನ ಮುಸಲ್ಮಾನ ಗೂಂಡಾಗಳು ಚಾಕು ಹಾಕಿದ್ದಾರೆ. ಅದಕ್ಕೂ ಮುಂಚೆ ಆತನ ಜತೆ ಇದ್ದ ಶರವಣನನ್ನು ಅಟ್ಟಿಸಿಕೊಂಡು ಹೋದರು. ಮೂರು ಜನ ಸಿಕ್ಕಿದ್ದಾರೆ. ಪೊಲೀಸರು ಉಳಿದವರ ಹುಡುಕುತ್ತಿದ್ದಾರೆ ಎಂದರು.
ಇದನ್ನೂ ಓದಿ:ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅತ್ತೆ, ಸೊಸೆ ಶವ ಪತ್ತೆ : ದರೋಡೆಕೋರರ ಕೈವಾಡ ಶಂಕೆ ?
ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಮುಸಲ್ಮಾನ ಹಿರಿಯರು ಶಾಂತಿ ಕಾಪಾಡಲು ಹಿಂದೆಲ್ಲಾ ಶ್ರಮಿಸಿದ್ದಾರೆ. ಈಗ ಮುಸಲ್ಮಾನ ಹಿರಿಯರು ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡುವುದಿಲ್ಲ. ಆದರೆ ಹಿಂದೂಗಳು ಅಶಕ್ತರಲ್ಲ. ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ. ಇದು ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯವಾಗಿಲ್ಲ. ಪದೇಪದೇ ಈ ರೀತಿಯ ಘಟನೆಯಾಗುತ್ತಿದ್ದರೂ ವೈಫಲ್ಯವಾಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೆದುಕೊಂಡಿದೆ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ ಎಂದು ಆರೋಪಿಸಿದರು.
ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ನಮ್ಹಬ್ಬದ ತಂಟೆಗೆ ಬರಬೇಡಿ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಜಗದೀಶ್ ಶೆಟ್ಟರ್ಗೆ ಆಪರೇಷನ್ ಹಸ್ತದ ಹೊಣೆ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?

JDS ಫ್ಯಾಮಿಲಿ ಟ್ರಸ್ಟ್; ಸಿಎಂ ಇಬ್ರಾಹಿಂ “ಭೂಗತ’: ಲಕ್ಷ್ಮಣ್ ವ್ಯಂಗ್ಯ

Cauvery issueತಮಿಳುನಾಡು ಸಿಎಂ ಭೇಟಿಗೆ 48 ತಾಸು ಕಾದು ಬರಿಗೈಯಲ್ಲಿ ಮರಳಿದ ಲೆಹರ್ ಸಿಂಗ್!

karnataka 2 ಕಡೆ ಸಂಶೋಧನ ಕೇಂದ್ರ ತೆರೆಯಲು ಆಪ್ಟೀವ್ ಕಂಪೆನಿಗೆ ಆಹ್ವಾನ
MUST WATCH
ಹೊಸ ಸೇರ್ಪಡೆ

Congress ಜಗದೀಶ್ ಶೆಟ್ಟರ್ಗೆ ಆಪರೇಷನ್ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?