ಬೆಂಗಳೂರು ಅಭಿವೃದ್ಧಿ: Infy ನಾರಾಯಣ ಮೂರ್ತಿ ಭೇಟಿಯಾದ ಕುಮಾರಸ್ವಾಮಿ
Team Udayavani, Jun 1, 2018, 4:39 PM IST
ಬೆಂಗಳೂರು : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಶುಕ್ರವಾರ ಇನ್ಫೋಸಿಸ್ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಭೇಟಿಯಾಗಿ, ಬೆಂಗಳೂರಿನ ಮೂಲ ಸೌಕರ್ಯ ಮತ್ತು ತ್ಯಾಜ್ಯ ನಿರ್ವಹಣೆ ಸೇರಿದಂತೆ ಮಹಾನಗರದ ಹೆಚ್ಚುತ್ತಿರುವ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಾರ್ಗದರ್ಶನವನ್ನು ಕೋರಿದರು.
ಬೆಂಗಳೂರಿನ ಮೂಲ ಸೌಕರ್ಯ ಮತ್ತು ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವಾರು ಅಗತ್ಯಗಳನ್ನು ಪೂರೈಸುವ ದಿಶೆಯಲ್ಲಿ ಪರಿಣತರ ಸಮಿತಿಯನ್ನು ರಚಿಸುವುದಕ್ಕೆ ಕುಮಾರಸ್ವಾಮಿ ಅವರು ಭೇಟಿಯ ವೇಳೆ ನಾರಾಯಣ ಮೂರ್ತಿ ಅವರ ನೆರವನ್ನು ಕೋರಿದರು.
ಮುಖ್ಯಮಂತ್ರಿ ನೇತೃತ್ವದ ಪ್ರಸ್ತಾವಿತ ಪರಿಣತರ ಸಮಿತಿಯು ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿಯ ಪರಾಮರ್ಶೆ ನಡೆಸುವುದು ಎಂದು ಕುಮಾರಸ್ವಾಮಿ ಹೇಳಿರುವುದಾಗಿ ಅಧಿಕೃತ ಪತ್ರಿಕಾ ಪ್ರಕಟನೆ ತಿಳಿಸಿದೆ.