ಡೆಮು ರೈಲಿಗೆ ಇಂದು ಚಾಲನೆ
Team Udayavani, Oct 15, 2019, 3:00 AM IST
ಹುಬ್ಬಳ್ಳಿ: ಸೇವಾ ಯೋಜನೆಯಡಿ ಸಣ್ಣ ಪಟ್ಟಣದಿಂದ ನಗರ ಪ್ರದೇಶಗಳಿಗೆ ರೈಲು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತುಮ ಕೂರು-ಯಶವಂತಪುರ (76527/76528) ಡೆಮು ರೈಲಿಗೆ ಅ.15ರಂದು ಚಾಲನೆ ಸಿಗಲಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಸಂಚಾರ ಮಾಡುವ ಈ ರೈಲಿಗೆ ರೈಲ್ವೆ ಹಾಗೂ ವಾಣಿಜ್ಯ-ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದರಾದ ಜಿ.ಎಸ್. ಬಸವರಾಜ, ಬಿ.ಎನ್. ಬಚ್ಚೇಗೌಡ ಇನ್ನಿತರರು ಭಾಗವಹಿಸಲಿ ದ್ದಾರೆ. ಸೇವಾ ಯೋಜನೆಯಡಿ ಡೆಮು ರೈಲು ಸಂಚಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಂಚಾರ ಮಾಡುತ್ತಿರುವ ಯಶವಂತಪುರ- ತುಮಕೂರು (06597/ 06598) ರೈಲಿನ ಸಂಚಾರವನ್ನು ಅ.15ರಿಂದ ಸ್ಥಗಿತಗೊಳಿಸಲಾ ಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ