“ಸರ್ವಪಕ್ಷ ನಿಯೋಗದೊಂದಿಗೆ ಹೋಗೋಣ’
Team Udayavani, Mar 19, 2020, 3:04 AM IST
ವಿಧಾನಸಭೆ: 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ರಾಜ್ಯಕ್ಕೆ ಸುಮಾರು 11 ಸಾವಿರ ಕೋಟಿ ರೂ.ಅನುದಾನ ಕಡಿಮೆಯಾಗಲಿದೆ. ರಾಜ್ಯದ ಹಣ ಪಡೆಯಲು ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆ ಆರಂಭಿಸಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಸುಮಾರು 11,887 ಕೋಟಿ ರೂ.ಬಾಕಿ ಹಣ ಬಂದಿಲ್ಲ. ಜಿಎಸ್ಟಿ, ವಿವಿಧ ಅನುದಾನಗಳ ಬಾಕಿ ಬಂದಿಲ್ಲ. ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ 16 ಸಾವಿರ ಕೋಟಿ ರೂ.ಬಂದಿಲ್ಲ. 15ನೇ ಹಣಕಾಸು ಆಯೋಗದಿಂದ 5,495 ಕೋಟಿ ರೂ.ಗಳನ್ನು ರಾಜ್ಯಕ್ಕೆ ಕೊಡಲು ನಿರ್ಧರಿಸಲಾಗಿತ್ತು.
ಈ ಹಣವನ್ನು ಕರ್ನಾಟಕಕ್ಕೆ ಕೊಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಪತ್ರ ಬರೆದಿದ್ದಾರೆ. ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋದವರು. ಹೀಗೆ ಮಾಡ್ತಾರೆ ಅಂತ ಅಂದೊRಂಡಿರಲಿಲ್ಲ. ಇಷ್ಟೊಂದು ಹಣ ಕೊರತೆಯಾದ ಮೇಲೆ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದಿಂದ ಬಿಜೆಪಿಯ 25 ಎಂಪಿಗಳೂ ಹೋಗಿ ಕೇಂದ್ರದ ಮುಂದೆ ಕುಳಿತುಕೊಳ್ಳಿ ಎಂದು ಆಗ್ರಹಿಸಿದರು.