ಎಲ್ಐಸಿಯಿಂದ ‘ಬಿಮಾ ರತ್ನ’ ಯೋಜನೆ
Team Udayavani, May 30, 2022, 11:54 PM IST
ಬೆಂಗಳೂರು: ಪ್ರತಿಷ್ಠಿತ ಭಾರತೀಯ ಜೀವನ ವಿಮಾ ನಿಗಮ(ಎಲ್ಐಸಿ)ವು ಗ್ರಾಹಕರ ಅನುಕೂಲಕ್ಕಾಗಿ “ಬಿಮಾ ರತ್ನ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಮೇ 27ರಿಂದಲೇ ಜಾರಿಗೆ ಬಂದಿದೆ.
ಉದ್ದೇಶಿತ ಯೋಜನೆಯಲ್ಲಿ ಪಾಲಿಸಿದಾರರಿಗೆ ಜೀವನ ಭದ್ರತೆ ಜತೆಗೆ ಉಳಿತಾಯವನ್ನೂ ಮಾಡ ಬಹುದಾಗಿದೆ. ಕನಿಷ್ಠ 15 ವರ್ಷ, 20 ಮತ್ತು 25 ವರ್ಷ ಎಂಬ ಮೂರು ಹಂತಗಳ ಅವಧಿಯ ಯೋಜನೆ ಇದಾಗಿದೆ. ಪ್ರೀಮಿಯಂ ಪಾವತಿ ಅವಧಿಯು ಒಟ್ಟಾರೆ ಅವಧಿಯ ನಾಲ್ಕು ವರ್ಷ ಕಡಿಮೆ ಇರುತ್ತದೆ.
ಪಾಲಿಸಿಯು ಕನಿಷ್ಠ 5 ಲಕ್ಷ ರೂ. ಮೊತ್ತದ್ದಾಗಿದ್ದು, ಪಾಲಿಸಿಯನ್ನು ಬ್ಯಾಂಕ್ಗಳು ಸಹಿತ ಎಲ್ಐಸಿ ಏಜೆಂಟರು, ವಿಮಾ ಮಾರುಕಟ್ಟೆ ಸಂಸ್ಥೆಗಳು (ಐಎಂಎಫ್), ಬ್ರೋಕರ್ಗಳು, ಸಿಪಿಎಸ್ಸಿ-ಎಸ್ಪಿವಿ ಮೂಲಕ ಮಾಡಿಸಬಹುದು.
ಪಾಲಿಸಿದಾರ ಸಾವನ್ನಪ್ಪಿದರೆ, ಕುಟುಂಬಕ್ಕೆ ಹಣಕಾಸಿನ ನೆರವು ದೊರೆಯಲಿದೆ. ಈ ನೆರವು ಮೂಲ ವಿಮಾ ಮೊತ್ತದ ಶೇ. 125ರಷ್ಟು ಅಥವಾ ಪಾಲಿಸಿದಾರ ಪಾವತಿಸುತ್ತಿದ್ದ ವಾರ್ಷಿಕ ಪ್ರೀಮಿಯಂನ ಏಳುಪಟ್ಟು ಆಗಿರುತ್ತದೆ. ಸಾಲ ಪಡೆಯುವ ಅವಕಾಶವೂ ಇದೆ ಎಂದು ಎಲ್ಐಸಿ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು