ಇಂದು ಕಾಂಗ್ರೆಸ್ ಪಟ್ಟಿ? 20ರಲ್ಲಿ 14 ಅಂತಿಮ
Team Udayavani, Mar 23, 2019, 12:30 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಂಡಿದ್ದು, ಶನಿ ವಾರ ಅಧಿಕೃತ ಬಿಡುಗಡೆ ಯಾಗುವ ಸಾಧ್ಯತೆ ಇದೆ. ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಾಲಿನ ಇಪ್ಪತ್ತು ಕ್ಷೇತ್ರಗಳಲ್ಲಿ 14 ಕ್ಷೇತ್ರ ಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಆರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ತಿಳಿದುಬಂದಿದೆ.
ಒಂಬತ್ತು ಮಂದಿ ಹಾಲಿ ಸಂಸದ ರಿಗೆ ಟಿಕೆಟ್ ಖಾತ್ರಿ ಯಾಗಿದ್ದು, ಬೆಳಗಾವಿ, ದಾವಣ ಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ದಕ್ಷಿಣ, ಮೈಸೂರು, ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಇನ್ನೂ ಅಂತಿಮ ತೀರ್ಮಾನ ವಾಗಿಲ್ಲ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ ಬೀದರ್-ಈಶ್ವರ್ ಖಂಡ್ರೆ, ಬಾಗಲಕೋಟೆ-ವೀಣಾ ಕಾಶಪ್ಪ ನವರ್, ಧಾರವಾಡ- ಶಾಕಿರ್ ಸನದಿ, ಹಾವೇರಿ-ಡಿ.ಆರ್. ಪಾಟೀಲ್, ಬೆಂಗಳೂರು ಕೇಂದ್ರ- ರಿಜ್ವಾನ್ ಅರ್ಷದ್, ಅವರ ಹೆಸರುಗಳು ಅಂತಿಮವಾಗಿವೆ ಎಂದು ತಿಳಿದುಬಂದಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬೀದರ್ ಈಶ್ವರ್ ಖಂಡ್ರೆ
ಕಲಬುರಗಿ ಮಲ್ಲಿಕಾರ್ಜುನ ಖರ್ಗೆ
ರಾಯಚೂರು ಬಿ.ವಿ. ನಾಯಕ್
ಬಳ್ಳಾರಿ ವಿ.ಎಸ್. ಉಗ್ರಪ್ಪ
ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ
ಬಾಗಲಕೋಟೆ ವೀಣಾ ಕಾಶಪ್ಪನವರ್
ಧಾರವಾಡ ಶಾಕೀರ್ ಸನದಿ
ಹಾವೇರಿ ಡಿ.ಆರ್. ಪಾಟೀಲ್
ಚಿತ್ರದುರ್ಗ ಬಿ.ಎನ್. ಚಂದ್ರಪ್ಪ
ಕೋಲಾರ ಕೆ.ಎಚ್. ಮುನಿಯಪ್ಪ
ಚಿಕ್ಕಬಳ್ಳಾಪುರ ವೀರಪ್ಪ ಮೊಯಿಲಿ
ಚಾಮರಾಜನಗರ ಧ್ರುವ ನಾರಾಯಣ
ಬೆಂಗಳೂರು ಗ್ರಾ. ಡಿ.ಕೆ. ಸುರೇಶ್
ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್
ದಕ್ಷಿಣ ಕನ್ನಡ ಬಿ.ಕೆ. ಹರಿಪ್ರಸಾದ್/ ವಿನಯ ಕುಮಾರ್ ಸೊರಕೆ
ಬೆಳಗಾವಿ ವಿ.ಎಸ್. ಸಾಧೂನವರ್/ಶಿವಕಾಂತ್ ಸಿದ್ನಾಳ್
ದಾವಣಗೆರೆ ಮಲ್ಲಿಕಾರ್ಜುನ್/ ಎಚ್.ಎಂ. ರೇವಣ್ಣ
ಮೈಸೂರು ಸಿ.ಎಚ್. ವಿಜಯ್ಶಂಕರ್/ಸೂರಜ್ ಹೆಗಡೆ
ಬೆಂಗಳೂರು ದಕ್ಷಿಣ ಗೋವಿಂದರಾಜ್/ ಜಿ. ಕೃಷ್ಣಪ್ಪ
ಕೊಪ್ಪಳ ಬಸವರಾಜ್ ಹಿಟ್ನಾಳ್/ಕೆ. ವಿರೂಪಾಕ್ಷಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ