ಕಾಂಗ್ರೆಸ್ ನಲ್ಲಿ ಅಪ್ಪು… ಪಪ್ಪು ಅಷ್ಟೇ ಇರುವುದು: ಆರ್.ಅಶೋಕ್
ಕಾಂಗ್ರೆಸ್, ಜೆಡಿಎಸ್ನಿಂದ ಸಾಕಷ್ಟು ನಾಯಕರು ಬಿಜೆಪಿಗೆ ಬರಲು ರೆಡಿ
Team Udayavani, Apr 22, 2022, 3:58 PM IST
ಬೆಂಗಳೂರು: ಚುನಾವಣೆಗೆ ಒಂದು ವರ್ಷ ಇದೆ. ಆದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಇವರಲ್ಲಿ ನಾಯಕರು ಯಾರು ಎಂಬ ಪ್ರಶ್ನೆ ಬಗೆಹರಿಯುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೂರು ಅಥವಾ ನಾಲ್ಕು ತಿಂಗಳು ಇದ್ದಾಗ ಈ ಹಿಂದೆ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಮೋದಿ, ಅಮಿತ್, ನಡ್ಡಾ ಬಂದ ಮೇಲೆ ಒಂದು ವರ್ಷ ಇರುವಾಗಲೇ ಪ್ರಚಾರ ಆರಂಭವಾಗಿದೆ. ಕಾಂಗ್ರೆಸ್ ಜೆಡಿಎಸ್ ಇನ್ನೂ ತಯಾರಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಇವರಲ್ಲಿ ಯಾರು ಎಂಬ ಗೊಂದಲ ಬಗೆಹರಿದಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಭಯೋತ್ಪಾದಕರು ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ: ಸಿ.ಟಿ.ರವಿ
ಜೆಡಿಎಸ್ ಇನ್ನೂ ಹೆಜ್ಜೆ ಇಟ್ಟಿಲ್ಲ. ಅವರ ಪಕ್ಷದಿಂದ ಸಾಕಷ್ಟು ಜನ ಗಂಟು ಮೂಟೆ ಕಟ್ಟುತ್ತಿದ್ದಾರೆ. ಹೀಗಾಗಿ ನಾವು 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ನಾವು ಮೋದಿ ಬಂದಾಗ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಪ್ರಚಾರಕ್ಕೆ ಯಾರಿದ್ದಾರೆ? ಪಪ್ಪುನಾ? ಕಾಂಗ್ರೆಸ್ ನಲ್ಲಿ ಅಪ್ಪು… ಪಪ್ಪು ಅಷ್ಟೇ ಇರುವುದು. ಜೆಡಿಸ್ ನಲ್ಲಿ ಆರರ ಮೇಲೆ ಸೀಟು ಗೆಲ್ಲಲ್ಲ ಎಂದರು.
ಸಾಕಷ್ಟು ನಾಯಕರು ಬಿಜೆಪಿಗೆ ಬರಲು ರೆಡಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬರುತ್ತಾರೆ. ಹೈಕಮಾಂಡ್ ಅನುಮತಿ ಕೊಡಬೇಕು ಅಷ್ಟೇ ಎಂದರು.
ಕಾಂಗ್ರೆಸ್ ಗೆ ಹಿಜಾಬ್ ಹಾಗೂ ಹುಬ್ಬಳ್ಳಿ ವಿಚಾರ ಬಿಟ್ಟರೆ ಬೇರೆ ಏನು ಕಾಣುತ್ತಿಲ್ಲ. ಇದರಿಂದಾಗಿಯೇ ಕಾಂಗ್ರೆಸ್ ಧೂಳಿಪಟ ಆಗುತ್ತಿದೆ. ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ನಲ್ಲಿ ಯಾರು ಇರಲ್ಲ. ಜನರಿಗೆ ಬೇಕಾಗಿದ್ದು ಅಭಿವೃದ್ಧಿ ಸರ್ಕಾರ. ನರೇಂದ್ರ ಮೋದಿ ಅಮೆರಿಕಾಗೆ ಹೋದರೆ ಅತೀ ಹೆಚ್ಚು ಜನ ಸೇರೋದು ಅಮೆರಿಕ ಅಧ್ಯಕ್ಷರಿಗಲ್ಲ, ಮೋದಿಯವರಿಗೆ. ಉಕ್ರೇನ್ ಹಾಗೂ ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ. ಎರಡೂ ದೇಶದ ನಾಯಕರು ಮೋದಿ ಫೋನ್ ಮಾತ್ರ ಸ್ವೀಕರಿಸುತ್ತಾರೆ. ಇದರಿಂದ ಭಾರತದ ಶಕ್ತಿ ಅರ್ಥವಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ