ಹಲವು ರೈಲುಗಳ ಸಂಚಾರ ರದ್ದು
Team Udayavani, Aug 18, 2018, 2:34 PM IST
ಮಂಗಳೂರು: ಕೇರಳದಲ್ಲಿ ನೆರೆ ಮತ್ತು ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ಮತ್ತು ತಿರುವನಂತಪುರ ವಿಭಾಗಗಳಲ್ಲಿ ಕೆಲವು ರೈಲುಗಳ ಸಂಚಾರವನ್ನು ಆ. 17ರಂದು ರದ್ದು ಪಡಿಸಲಾಗಿತ್ತು.
ವಾರದಲ್ಲಿ 3 ದಿನ ಸಂಚರಿಸುವ ಕಣ್ಣೂರು/ ಕಾರವಾರ- ಬೆಂಗಳೂರು (16518/16524) ಎಕ್ಸ್ಪ್ರೆಸ್, ಬೆಂಗಳೂರು- ಕಣ್ಣೂರು/ ಕಾರವಾರ (16511/16513) ಎಕ್ಸ್ಪ್ರೆಸ್, ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ (12601) ಎಕ್ಸ್ಪ್ರೆಸ್, ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ (22637) ವೆಸ್ಟ್ಕೋಸ್ಟ್ ಎಕ್ಸ್ಪ್ರೆಸ್, ಮಂಗಳೂರು ಸೆಂಟ್ರಲ್- ಚೆನ್ನೈ ಸೆಂಟ್ರಲ್ ಮೈಲ್ (12602) ಎಕ್ಸ್ಪ್ರೆಸ್,
ಮಂಗಳೂರು ಸೆಂಟ್ರಲ್- ತಿರುವನಂತಪುರಂ (16348) ಎಕ್ಸ್ಪ್ರೆಸ್, ಮಂಗಳೂರು ಸೆಂಟ್ರಲ್- ಚೆನ್ನೈ ಸೆಂಟ್ರಲ್ (12686) ಎಕ್ಸ್ಪ್ರೆಸ್, ಮಂಗಳೂರು ಸೆಂಟ್ರಲ್- ಚನ್ನೈ ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್ (16603), ಮಂಗಳೂರು ಸೆಂಟ್ರಲ್- ತಿರುವನಂತಪುರಂ (16630) ಎಕ್ಸ್ಪ್ರೆಸ್, ಮಂಗಳೂರು ಜಂಕ್ಷನ್- ಕೊಚ್ಚುವೇಲಿ ಅಂತ್ಯೋದಯ (16356) ಎಕ್ಸ್ಪ್ರೆಸ್ ರೈಲುಗಳನ್ನು ಆ. 17ರಂದು ರದ್ದು ಪಡಿಸಲಾಗಿತ್ತು.