ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಾಯಣಗೌಡ
Team Udayavani, Sep 21, 2020, 3:37 PM IST
ಬೆಂಗಳೂರು: ಶಾಸಕ ಬೆಳ್ಳಿ ಪ್ರಕಾಶ್ ಏನೋ ಶಬ್ದ ಬಳಕೆ ಮಾಡಿದರು. ಅವರು ಸ್ವಲ್ಪ ಏಕವಚನದಲ್ಲೇ ಮಾತಾಡಿದರು. ಅದರಿಂದ ನನಗೆ ತುಂಬಾ ಬೇಜಾರಾಯ್ತು ಎಂದು ತೋಟಗಾರಿಕಾ ಸಚಿವ ನಾರಯಣ ಗೌಡ ಹೇಳಿದರು.
ಇಂದು ಮಧ್ಯಾಹ್ನ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ತಮ್ಮ ಮತ್ತು ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ನಡೆದ ಗಲಾಟೆಯ ಕುರಿತು ಮಾಧ್ಯಮದವರ ಎದುರು ಮಾತನಾಡಿದರು.
ಗಲಾಟೆ ಏನಿಲ್ಲ. ಒಂದು ವರ್ಗಾವಣೆ ಇತ್ತು. ಅದರ ಬಗ್ಗೆ ಬನ್ನಿ ಮಾತಾಡೋಣ ಎಂದು ಹೇಳಿದ್ದೆ. ಅವರು (ಶಾಸಕ ಬೆಳ್ಳಿ ಪ್ರಕಾಶ್) ಸ್ವಲ್ಪ ಏಕವಚನದಲ್ಲಿ ಮಾತಾಡಿದರು. ಅದಕ್ಕೆ ನನಗೆ ಸ್ವಲ್ಪ ಬೇಜಾರು ಆಯ್ತು. ಅವರು ಇನ್ಮುಂದೆ ಹೀಗೆಲ್ಲಾ ಮಾತನಾಡಬಾರದು ಅಷ್ಟೇ ಎಂದು ನಾರಾಯಣ ಗೌಡ ಎಚ್ಚರಿಕೆ ನೀಡಿದರು.
ವಿಡಿಯೋ ನೋಡಿ :ವಿಧಾನಸೌಧದಲ್ಲಿ ಮಾರಾಮಾರಿಗೆ ಮುಂದಾದ ಬಿಜೆಪಿ ನಾಯಕರು
ಅವರು ಮಾತಾಡೋದು ರಫ್. ಹಾಗಂತ ಅವರು ಆ ರೀತಿ ಮಾತಾನಾಡಕೂಡದು. ಒಂದು ವೇಳೆ ಮುಖ್ಯಮಂತ್ರಿಗಳು ನನ್ನನ್ನು ಕರೆದರೆ ನಾನು ಹೋಗಿ ಮಾತಾಡ್ತೇನೆ ಎಂದರು.
ಇಂದು ಮಧ್ಯಾಹ್ನ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ ಎಸ್ ಈಶ್ವರಪ್ಪ, ವಿ ಸೋಮಣ್ಣ ಎದುರು ಈ ಬಿಜೆಪಿ ನಾಯಕರು ಕಿತ್ತಾಡಿಕೊಂಡಿದ್ದರು.