ಸಚಿವ ಶ್ರೀರಾಮುಲುಗೆ ಮಾಜಿ ಸಿಎಂ ಬಿಎಸ್ವೈ ಹಿತವಚನ
Team Udayavani, Jul 16, 2022, 9:17 PM IST
ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸದಿದ್ದರೆ ರಾಜೀನಾಮೆ ನೀಡುವುದಾಗಿ ಪದೇಪದೆ ಹೇಳುತ್ತಿರುವ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬುದ್ಧಿವಾದ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನ ಹೊರ ವಲಯದಲ್ಲಿ ಜರಗಿದ ಪಕ್ಷದ ಚಿಂತನ-ಮಂಥನ ಸಭೆಯಲ್ಲಿ, ವಾಲ್ಮೀಕಿ ಸಮುದಾಯಕ್ಕೆ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಷ್ಟು ಬಾರಿ ಹೇಳುತ್ತಿ ಹಾಗೂ ಎಷ್ಟು ಸಲ ನೀನು ರಾಜೀನಾಮೆ ನೀಡುತ್ತಿ? ನೀನು ಈ ರೀತಿ ಹೇಳಿದರೆ ಪಕ್ಷದ ವರ್ಚಸ್ಸು ಏನಾಗಬೇಕು? ನೀನು ಹಿರಿಯ ಸಚಿವನಾಗಿದ್ದು, ನಿನಗೂ ಜವಾಬ್ದಾರಿ ಇದೆ. ಇನ್ನು ಮುಂದೆ ಆ ರೀತಿಯ ಹೇಳಿಕೆಗಳನ್ನು ಕೊಡಬೇಡ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.