ಬಿಜೆಪಿಯವರಿಂದ ಶಾಸಕ ಗಣೇಶ ರಕ್ಷಣೆ: ಪರಮೇಶ್ವರ್
Team Udayavani, Jan 28, 2019, 1:04 AM IST
ಬೆಂಗಳೂರು: ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಕಂಪ್ಲಿ ಶಾಸಕ ಗಣೇಶ್ ಅವರನ್ನು ಬಿಜೆಪಿಯವರು ರಕ್ಷಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ತನಿಖಾ ಸಮಿತಿಯ ಅಧ್ಯಕ್ಷನಾಗಿ ವಿಚಾರಣೆಗೆ ಆಗಮಿಸಿಲ್ಲ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತನಿಖೆ ನಡೆಸುವುದು ಸರಿಯಲ್ಲ. ಸಮಿತಿ ಸದಸ್ಯರಾದ ಸಚಿವ ಕೆ.ಜೆ. ಜಾರ್ಜ್ ಅವರೂ ಬರಬೇಕು. ಆನಂದ್ ಸಿಂಗ್ ಅವರ ಆರೋಗ್ಯ ಸುಧಾರಿಸಿದ ನಂತರ ತನಿಖೆ ಆರಂಭಿಸುವುದಾಗಿ ಹೇಳಿದರು. ಹಲ್ಲೆ ನಡೆಸಿ ನಾಪತ್ತೆ ಯಾಗಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಪೊಲೀಸರು ಹುಡು ಕುತ್ತಿದ್ದಾರೆ. ಬಿಜೆಪಿಯವರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.