ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ
Team Udayavani, Oct 20, 2021, 1:57 PM IST
ಬಳ್ಳಾರಿ: ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಬುದ್ಧಿಮಾಂದ್ಯರಾಗಿದ್ದಾರೆ. ಆರ್ ಎಸ್ಎಸ್ ಅಂದರೆ ದೇಶ ಪ್ರೇಮ ಹಾಗೂ ದೇಶ ಭಕ್ತಿ ಕಲಿಸೋ ಆರ್ಗನೈಸೇಷನ್ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಆರ್ ಎಸ್ಎಸ್ ದೇಶಕ್ಕಾಗಿ ಹೋರಾಟ ಮಾಡುತ್ತದೆ, ದೇಶಕ್ಕೆ ವಿಪತ್ತು ಬಂದ್ರೆ ಎನ್ ಡಿಆರ್ ಎಫ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅಂತಹ ಆರ್ ಎಸ್ಎಸ್ ಬಗ್ಗೆ ಮಾತಾನಾಡುವ ಮುನ್ನ ಸಂಘದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲಿ ಎಂದು ಎಚ್ಚರಿಸಿದರು.
ಇನ್ನೂಮ್ಮೆ ಈ ರೀತಿ ಮಾತನಾಡಿದ್ರೇ ಛೀಮಾರಿ ಹಾಕಬೇಕಾಗುತ್ತದೆ. ಹೆಚ್ ಡಿಕೆ ಉಪಚುನಾವಣೆ ಹಿನ್ನೆಲೆ ಮತ ಓಲೈಕೆಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.