“ಕುದುರೆ ವ್ಯಾಪಾರ ಹಿಂದಿನ ವ್ಯಕ್ತಿ ಮೋದಿ’:ಎಂ.ಸಿ.ನಾಣಯ್ಯ ಆರೋಪ
Team Udayavani, Jan 18, 2019, 12:50 AM IST
ಬೆಂಗಳೂರು: “ಸಮ್ಮಿಶ್ರ ಸರ್ಕಾರವನ್ನು ಕುದುರೆ ವ್ಯಾಪಾರದ ಮೂಲಕ ಅಭದ್ರಗೊಳಿಸುತ್ತಿರುವ ಹಿಂದಿನ ಶಕ್ತಿ ಮತ್ತು ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರೇ’ ಎಂದು ಕಾಂಗ್ರೆಸ್ ಮುಖಂಡ ಎಂ.ಸಿ.ನಾಣಯ್ಯ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಧಾನಿಯವರು ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಬರದಿಂದ ತತ್ತರಿಸುತ್ತಿರುವಾಗ 104 ಶಾಸಕರನ್ನು ದೆಹಲಿಯಲ್ಲಿ ಗುಡ್ಡೆ ಹಾಕಿಕೊಂಡು ಕೂರುವ ಅಗತ್ಯವೇನು?
ದೆಹಲಿಗೆ ರಾಜ್ಯ ಬಿಜೆಪಿ ಶಾಸಕರನ್ನು ಕರೆದೊಯ್ದು ಹೋಟೆಲ್ನಲ್ಲಿ ಕೂಡಿ ಹಾಕಿರುವ ಮರ್ಮವೇನು ಎಂಬುದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.