“ಸರ್ಜಿಕಲ್ ಸ್ಟ್ರೈಕ್ ಹೆಸರಲ್ಲಿ ಮೋದಿ ರಾಜಕೀಯ
Team Udayavani, Feb 28, 2019, 12:01 AM IST
ಸೇಡಂ: ದೇಶದ ಜನರ ರಕ್ಷಣೆ ದೃಷ್ಟಿಯಿಂದ ನಡೆಯುತ್ತಿರುವ ಪಾಕಿಸ್ತಾನ ಉಗ್ರವಾದಿಗಳ ಮೇಲಿನ ಸರ್ಜಿಕಲ್ ಸ್ಟ್ರೈಕ್ನ್ನು ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಟ್ಟಣದಲ್ಲಿ ಮಾತನಾಡಿ, ಭಾರತದ ಸೇನೆ ದೇಶದ ರಕ್ಷಣೆಗಾಗಿ ಸದಾ ಹೋರಾಡುತ್ತದೆ. ವಿರೋಧಿಗಳ ಮೇಲೆ ದಾಳಿ ಮಾಡುತ್ತದೆ. ಈ ಪ್ರಕ್ರಿಯೆ ಪ್ರಜೆಗಳ ರಕ್ಷಣೆಗಾಗಿ ಹೊರತು ಇದೇನು ಮೋದಿ ಸರ್ಜಿಕಲ್ ಸ್ಟ್ರೈಕ್ ಅಲ್ಲ. ಎಲ್ಒಸಿ ದಾಟಿ ಉಗ್ರರನ್ನು ಸದೆಬಡಿದ ಯೋಧರ ಕಾರ್ಯವನ್ನು ಪûಾತೀತವಾಗಿ ಎಲ್ಲರೂ ಅಭಿನಂದಿಸಬೇಕು. ಯುಪಿಎ ಅವಧಿಯಲ್ಲೂ ಸಹ ಅನೇಕ ಸರ್ಜಿಕಲ್ ದಾಳಿಗಳು ನಡೆದಿವೆ. ಆಗ ನಮ್ಮ ಸರ್ಕಾರ ಯಾವುದೇ ಪ್ರಚಾರ ಗಿಟ್ಟಿಸಿಕೊಂಡಿಲ್ಲಎಂದು ಹೇಳಿದರು. ಮೋದಿ ಎಲ್ಲೆಂದರಲ್ಲಿ ನಾನು ಚಾಯ್ ವಾಲಾ, ಚಾಯ್ ಮಾರುವವನು ಎಂದು ಹೇಳಿಕೊಳ್ಳುತ್ತಿರು ವುದು ಅವರಿಗೆ ಅಪಮಾನ ತರುವ ವಿಚಾರ. ನಾನೂ ಕಾರ್ಮಿಕನ ಮಗ. ಹೀಗೆ ನೀವು ಚಾಯಾÌಲಾ, ನಾನು ಕಾರ್ಮಿಕನ ಮಗ ಎಂದು ಹೇಳಿಕೊಳ್ಳುತ್ತಲೇ ಹೋದರೆ ಹೇಗೆಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ