ನಮಗಂತೂ ಮೋದಿ ಭಾಷಣ ನಿರಾಸೆ ತಂದಿದೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Team Udayavani, Apr 14, 2020, 11:58 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮೇ ಮೂರನೇ ತಾರೀಖಿನ ವರೆಗೂ ಲಾಕ್ ಡೌನ್ ಮುಂದುವರೆಸಿದ್ದಾರೆ. ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಯವರಿಂದ ಬಹಳ ನಿರೀಕ್ಷೆ ಮಾಡಿದ್ದೆವು. ನಮಗಂತೂ ಮೋದಿ ಭಾಷಣ ನಿರಾಸೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಪ್ರಧಾನಿಯವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಹಿತಕ್ಕಾಗಿ ಅವರದ್ದೇ ಆದ ರೀತಿಯ ಸಂದೇಶ ನೀಡಿದ್ದಾರೆ. ರಿಯಾಯಿತಿ ಕೊಡ್ತಾರೆ ಅಂದುಕೊಂಡಿದ್ದೆವು. ಕಾರ್ಮಿಕರು ಮತ್ತು ಉದ್ಯಮಿಗಳು ಮತ್ತು ರೈತರಿಗೆ ವಿನಾಯತಿ ಕೊಡ್ತಾರೆ ಅಂದುಕೊಂಡಿದ್ದೆವು. ಇದರ ಬಗ್ಗೆ ಏನು ಹೇಳಿಲ್ಲ. ನಾವು ಸಹಕಾರ ಕೊಡ್ತೀವಿ ಅದ್ರೆ ಯಾವುದೇ ವಿನಾಯಿತಿ ಕೊಡದಿರುವುದು ಬೇಸರ ತಂದಿದೆ ಎಂದರು.
ವೈದ್ಯರಿಗೆ ಒಳ್ಳೆಯ ಕಿಟ್ ಕೊಡುತ್ತಿಲ್ಲ. ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಕಿಟ್ ಕೊಟ್ಟಿದ್ದಾರೆ. ವೈದ್ಯರು, ಪೊಲೀಸರು, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಕಿಟ್ ಕೊಡಲಿ. ನಮಗಂತೂ ಮೋದಿ ಭಾಷಣ ನಿರಾಸೆ ತಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ