ಮಂಗನ ಕಾಯಿಲೆ ಲಸಿಕೆ ಬೇಡಿಕೆ ದುಪ್ಪಟ್ಟು
Team Udayavani, Mar 13, 2019, 12:30 AM IST
ಬೆಂಗಳೂರು: ಕೇವಲ ಮಲೆನಾಡಿನ ಸಣ್ಣ ಗ್ರಾಮಕ್ಕೆ ಸೀಮಿತವಾಗಿದ್ದ ಮಂಗನ ಕಾಯಿಲೆ ಈಗ ಇಡೀ ದಕ್ಷಿಣ ಭಾರತಕ್ಕೆ ಹಬ್ಬುತ್ತಿದೆ. ಇದರಿಂದ ಲಸಿಕೆ ಬೇಡಿಕೆಯು ದುಪ್ಪಟ್ಟಾಗುತ್ತಿದ್ದು, ಇದನ್ನು ಪೂರೈಸುವ ಏಕೈಕ ಸಂಸ್ಥೆಯಾಗಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ದೊಡ್ಡ ಸವಲಾಗಿ ಪರಿಣಮಿಸಿದೆ.
1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಇಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಗಡಿದಾಟಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ಕೆಲ ಭಾಗಗಳಲ್ಲಿ ವ್ಯಾಪಿಸಿದೆ. ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಿರುವ ಅಲ್ಲಿನ ಆರೋಗ್ಯ ಇಲಾಖೆಗಳಿಂದ ಲಸಿಕೆಗೆ ಸಾಕಷ್ಟು ಬೇಡಿಕೆ ಬಂದಿದೆ. ಇದು ಮಂಗನ ಕಾಯಿಲೆಗೆ ಲಸಿಕೆ ಸಿದ್ಧಪಡಿಸುವ ಏಕೈಕ ಸಂಸ್ಥೆಯಾದ ಬೆಂಗಳೂರಿನ ಹೆಬ್ಟಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಹೊರೆಯೂ, ಸವಾಲೂ ಆಗಿ ಪರಿಣಮಿಸಿದೆ.
1926ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ 2001ರಿಂದ ಮಂಗನ ಕಾಯಿಲೆ ಲಸಿಕೆ (ಕೆಎಫ್ಡಿ- ಕ್ಯಾಸನೂರು ಫಾರೆಸ್ಟ್ ಡಿಸೀಸ್ ಲಸಿಕೆ) ತಯಾರಿಕೆ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಈ ಒಂದು ಸಂಸ್ಥೆಯೇ ಮಂಗನ ಕಾಯಿಲೆಗೆ ಲಸಿಕೆ ಸಿದಟಛಿಪಡಿಸಿ ಆರೋಗ್ಯ ಇಲಾಖೆಗೆ ನೀಡುತ್ತದೆ. ಇದರ ಜತೆಗೆ ಈ ಸಂಸ್ಥೆಗೆ ಇತರೆ 11 ವಿವಿಧ ಪ್ರಾಣಿ ಲಸಿಕೆಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯೂ ಇದೆ. ಆರೋಗ್ಯ ಇಲಾಖೆಯು ಬೇಡಿಕೆಗೆ ಅನುಗುಣವಾಗಿ ಲಸಿಕೆಯನ್ನು ವಿವಿಧ ಭಾಗಗಳಿಗೆ ಹಂಚುತ್ತದೆ.
ಭವಿಷ್ಯದಲ್ಲಿ ಲಸಿಕೆ ಕೊರತೆ ?: ಒಂದು ಲಸಿಕೆಯನ್ನು ಸಿದ್ಧಪಡಿಸಲು ಕನಿಷ್ಠ ಎರಡೂವರೆ ತಿಂಗಳು ಕಾಲಾವಕಾಶ ಬೇಕಿದ್ದು, ಒಮ್ಮೆಗೆ 50 ಸಾವಿರ ಲಸಿಕೆಗಳನ್ನು ಮಾತ್ರ ಸಿದ್ಧಪಡಿಸುವ ಸಾಮರ್ಥ್ಯವಿದೆ. ಆದರೆ, 2019-20ನೇ
ಸಾಲಿಗೆ 4.50 ಲಕ್ಷ ಲಸಿಕೆ ಬೇಡಿಕೆ ಇದ್ದು, ಸಂಸ್ಥೆಯ ಸಾಮರ್ಥ್ಯದಂತೆ ಮುಂಬರುವ ವರ್ಷಕ್ಕೆ ಬರೋಬ್ಬರಿ 2.5 ರಿಂದ 3 ಲಕ್ಷ ಲಸಿಕೆಗಳನ್ನಷ್ಟೇ ಉತ್ಪಾದಿಸಬಹುದು. ಉಳಿದ 1.5 ಲಕ್ಷ ಲಸಿಕೆಗಳು ಕೊರತೆಯಾಗುವ ಸಾಧ್ಯತೆಗಳಿವೆ. ಈ ಕೊರತೆ ನೀಗಿಸಲು ಪ್ರತ್ಯೇಕ ಸಂಶೋಧನಾ ಸಂಸ್ಥೆ ಹಾಗು ಸಿಬ್ಬಂದಿ ಅಗತ್ಯವಿದೆ.
ಲಸಿಕೆ ಸಿದ್ಧಪಡಿಸುವುದು ಹೇಗೆ?
ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಮೂಲಕ ಸಿದ್ಧಪಡಿಸುವ ಲಸಿಕೆ ಇದಾಗಿದ್ದು, ಮೊದಲು ಕೋಳಿ ಮೊಟ್ಟೆಯಲ್ಲಿ ಬೆಳವಣಿಗೆ ಹೊಂದುತ್ತಿರುವ ಮರಿಗೆ ವೈರಸ್ ಹಾಕಿ 1.5 ತಿಂಗಳು ವೈರಸ್ ಬೆಳವಣಿಗೆ ಮಾಡಲಾಗುತ್ತದೆ. ಆನಂತರ ಕೋಳಿ ಮರಿಯಿಂದ ಅದನ್ನು ನಿಷ್ಕ್ರಿಯಗೊಳಿಸಿ ಲಸಿಕೆಯನ್ನು ಸಂಸ್ಕರಿಸಲಾಗುತ್ತದೆ. ಅಂತಿಮವಾಗಿ ಸಿದ್ಧವಾಗುವ ದ್ರಾವಣ ರೂಪದ ಲಸಿಕೆಯನ್ನು ಮಂಗದ ಮೇಲೆ ಪರಿವೀಕ್ಷಣೆ ಮಾಡಲಾಗುತ್ತದೆ. ಒಟ್ಟಾರೆ ಎರಡೂವರೆ ತಿಂಗಳ ಪ್ರಕ್ರಿಯೆ ಇದಾಗಿದ್ದು, ಒಂದು ಲಸಿಕೆ ತಯಾರಿಸಲು 35 ರೂ.ವೆಚ್ಚ ತಗಲುತ್ತದೆ ಎಂದು ವಿಜ್ಞಾನಿ ಡಾ.ಅಮಿತಾ ರೀನಾ ಗೋಮ್ಸ್ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಮಂಗನಕಾಯಿಲೆ ಲಸಿಕೆ ಸಿದ್ಧಪಡಿಸಲು ಪ್ರತ್ಯೇಕ ಪ್ರಯೋಗಾಲಯ ಆರಂಭಿಸುವ ಕುರಿತು ಚಿಂತನೆ ನಡೆದಿದೆ. ಪ್ರಸ್ತುತ 5 ಕೊಟಿ ರೂ.ರಾಜ್ಯ ಸರ್ಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಿದರೆ ಎರಡು ವರ್ಷದೊಳಗೆ ಪ್ರಯೋಗಾಲಯ ನಿರ್ಮಿಸಿ ಕಾರ್ಯ ನಿರ್ವಹಣೆ ಮಾಡಬಹುದು.
● ಡಾ.ಎಸ್.ಎಂ.ಬೈರೇಗೌಡ, ನಿರ್ದೇಶಕರು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ
ಜಯ ಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ