ಯತ್ನಾಳ ವಿರುದ್ಧ ಹತ್ಯೆ ಸಂಚು ಆರೋಪ
Team Udayavani, Nov 4, 2019, 3:00 AM IST
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೊಲೀಸರ ಮೂಲಕ ನನಗೆ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ನನ್ನ ಸಾವು ಸಂಭವಿಸಿದರೆ ಅದಕ್ಕೆ ಶಾಸಕ ಯತ್ನಾಳ ಹಾಗೂ ನಗರದ ಗಾಂಧಿ ಚೌಕ್ ಠಾಣೆ ಪಿಎಸ್ಸೈ ಶರಣಗೌಡ ಕಾರಣ ಎಂದು ಫೇಸ್ಬುಕ್ನಲ್ಲಿ ಸಂದೇಶ ಹಾಕಿ ಬಿಜೆಪಿ ಕಾರ್ಯಕರ್ತ ನಾಪತ್ತೆಯಾಗಿದ್ದಾನೆ. ಇಡೀ ಪ್ರಕರಣ ಬಿಜೆಪಿ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ. ಬಾಬು ಜಗದಾಳೆ ಎಂಬ ಬಿಜೆಪಿ ಯುವ ಕಾರ್ಯಕರ್ತನೇ ಸ್ವಪಕ್ಷೀಯ ಶಾಸಕನ ವಿರುದ್ಧ ಜೀವ ಬೆದರಿಕೆ ಹಾಕಿ ನಾಪತ್ತೆಯಾದವರು.
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅದೇ ಪಕ್ಷದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಧ್ಯೆ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಪರಿಣಾಮ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗ ಜಗದಾಳೆ ತನ್ನದೇ ಪಕ್ಷದ ಶಾಸಕ ಯತ್ನಾಳ ಜೀವಬೆದರಿಕೆ ಹಾಕಿದ್ದಾರೆಂಬ ಹಂತಕ್ಕೆ ಬಂದು ತಲುಪಿದೆ. ವಿಜಯಪುರ “ಐ ವಾಂಟ್ ಜಸ್ಟಿಸ್’ ಎಂದು ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಾಬು ಜಗದಾಳೆ, ನನ್ನ ಜೀವ ಹೋದರೆ ಅದಕ್ಕೆ ಶಾಸಕ ಯತ್ನಾಳ, ಗಾಂಧಿ ಚೌಕ್ ಠಾಣೆ ಪಿಎಸ್ಸೈ ಶರಣಗೌಡ ಕಾರಣ ಎಂದು ಶನಿವಾರ ರಾತ್ರಿ ಸಂದೇಶ ಹಾಕಿದ್ದಾನೆ.
ಪಿಎಸ್ಸೈ ಶರಣಗೌಡ ತನ್ನ ಮೇಲೆ ಹಲ್ಲೆ ನಡೆಸಿ, ಕೆಟ್ಟದ್ದಾಗಿ ನಿಂದಿಸಿದ್ದಾರೆ. ನನ್ನ ಮೇಲೆ ವಾಹನ ಅಪಘಾತ ಮಾಡುವ ಸಂಚು ನಡೆಯುತ್ತಿದೆ. ನಾಳೆ ನಿನ್ನ ಹೆಣಾ ಎತ್ಕೊಂಡು ಪ್ರತಿಭಟನೆ ಮಾಡ್ತಾರ, ಮತ್ತ ಹೋಗಿ ಮಕ್ಕೋತಾರೆ ಎಂದು ಪೋಸ್ಟ್ ಹಾಕಿರುವ ಬಾಬು, ನೀನೇನು ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣನಿಗೆ ಹುಟ್ಟಿದ್ದೀಯಾ. ನಿನ್ನನ್ನು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯತ್ತಾರೆ ಎಂದು ನಿಂದಿಸಿದ್ದಾಗಿ ಆರೋಪಿಸಿದ ವಿಡಿಯೋ ಹಾಕಿ ನಾಪತ್ತೆಯಾಗಿದ್ದಾನೆ. ಸದ್ಯ ಬಾಬು ಮೊಬೈಲ್ ಸ್ವಿಚ್ಆಫ್ ಆಗಿದ್ದು, ವಿಡಿಯೋ ವೈರಲ್ ಅಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ