“ನಳೀನ್ ಕುಮಾರ್ ಕಟೀಲ್ ಮಂಗಳೂರು ಬಿಟ್ಟು ಬಂದಿಲ್ಲ’
Team Udayavani, Aug 22, 2019, 3:00 AM IST
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಮಂಗಳೂರು ಬಿಟ್ಟು ಬಂದಿಲ್ಲ ಎಂದು ಬಸನಗೌಡ ಪಾಟೀಲ್ ಟೀಕಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಅವರು ಬೀದರ್ನಿಂದ ಚಾಮರಾಜನಗರದಿಂದ ಅಡ್ಡಾಡಬೇಕು.
ಮಂಗಳೂರು-ಕೊಡಗು-ಉಡುಪಿ ನಡುವೆ ಮಾತ್ರ ಓಡಾಡಿಕೊಂಡಿದ್ದರೆ ಪ್ರಯೋಜನವಾಗದು. ಹಿಂದೆ ಸದಾನಂದಗೌಡರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗಲೂ ನಾನು ಇದನ್ನೇ ಹೇಳಿದ್ದೆ. ರಾಜ್ಯಾಧ್ಯಕ್ಷರಾದವರು ಪ್ರತಿ ಜಿಲ್ಲೆಗೂ ಹೋಗಬೇಕು. ಅಲ್ಲಿನ ಹತ್ತು ಕಾರ್ಯಕರ್ತರು, ಮುಖಂಡರ ಹೆಸರು ಹಿಡಿದು ಗುರುತಿಸಬೇಕು ಎಂದರು.