ಕಾಂಗ್ರೆಸ್ ಪಕ್ಷಕ್ಕೆ ಈ ಮೂರು ಶಾಪ ತಟ್ಟಿದೆ ; ಚಾಮರಾಜನಗರದಲ್ಲಿ ನಳಿನ್ ಕುಮಾರ್ ವಾಗ್ದಾಳಿ
Team Udayavani, Jan 11, 2021, 9:14 PM IST
ಚಾಮರಾಜನಗರ : ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಜನರು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನರ ತಿರಸ್ಕಾರದ ಯೋಜನೆ ಮಾಡಿದರು. ಹಾಗಾಗಿ ಇಡೀ ರಾಜ್ಯದ ಜನರೆ ಸಿದ್ದರಾಮಯ್ಯ ಅವರನ್ನ ತಿರಸ್ಕಾರ ಮಾಡಿದ್ದಾರೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಾಮರಾಜನಗರದಲ್ಲಿನ ಜನಸೇವಕ ಸಮಾವೇಶದಲ್ಲಿ ಮಾತಾನಾಡಿದ ಅವರು,ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗ್ರಾಮ ಸ್ವರಾಜ್ ಅಂಶಗಳಿಲ್ಲ. ಕಾಂಗ್ರೆಸ್ ಕೇವಲ ನಾಲ್ಕು ಮಂದಿಯ ಜನ್ಮ, ತಿಥಿಯ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್ ತಿಥಿ ಪಕ್ಷವಾಗಿದೆ. ಮಹಾತ್ಮ ಗಾಂಧಿಯವರಿಂದ ಕಾಂಗ್ರೆಸ್ ಗೆ ಮೂರು ಶಾಪ ತಟ್ಟಿದೆ. ರಾಮರಾಜ್ಯ ಸ್ವರಾಜ್ ಗೆ ಕಾಂಗ್ರೆಸ್ ಬೆಂಕಿ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ರಾವಣರನ್ನುನಿರ್ಮಾಣ ಮಾಡಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಂದೂ ಅಂಬೇಡ್ಕರ್ ಅವರನ್ನ ಮಂತ್ರಿ ಮಾಡಿಲ್ಲ.ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷವೇ.ಆದರೆ ಅಂಬೇಡ್ಕರ್ ಭಾವಚಿತ್ರ ಹಾಕಿ ಮತ ಕೇಳಿದ್ದು ಅದೇ ಕಾಂಗ್ರೆಸ್ ಪಕ್ಷ. ಹಾಗಾಗಿ ಡಾ.ಬಿಆರ್ ಅಂಬೇಡ್ಕರ್ ಶಾಪವೂ ಕಾಂಗ್ರೆಸ್ ಗೆ ತಟ್ಟಿದೆ. ಹಸು ಮತ್ತು ಕರು, ಜೋಡೆತ್ತು ಚಿಹ್ನೆಯಿಂದ ಮತ ಪಡೆದಿತ್ತು. ಗೋಹತ್ಯೆ ಮಾಡಿದವರ ಬೆಂಗಾವಲಾಗಿ ನಿಂತಿತು. ಆ ಗೋ ಶಾಪ ಕಾಂಗ್ರೆಸ್ ಗೆ ತಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮ ಆಗಿ ಅರಬಿ ಸಮುದ್ರದಲ್ಲಿ ಬಿದ್ದು ಹೋಗಲಿದೆ.ಸಿದ್ದರಾಮಯ್ಯ ದಿನಕ್ಕೊಂದು ಕ್ಷೇತ್ರದಲ್ಲಿ ನಿಲ್ಲುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ 18 ಗ್ರಾಪಂ ಬಿಜೆಪಿ ಆಡಳಿತ ಹಿಡಿದಿದೆ, ಕಾಂಗ್ರೆಸ್ ಎಂಟರಲ್ಲಿ ಗೆದ್ದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 18 ಹಿಂದು ಕಾರ್ಯಕರ್ತರು ಕೊಲೆಯಾಗಿದೆ. ಹತ್ಯೆಗಳ ಸರಣಿ ಕಾಲ ಸಿದ್ರಾಮಣ್ಣನ ಕಾಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆದ್ದು ಸರ್ಕಾರ ಮಾಡಲಿದ್ದೇವೆ.