ಇನ್ನು ವೃದ್ಧಾಪ್ಯ ವೇತನಕ್ಕೆ ಅರ್ಜಿ ಬೇಡ: ಅಶೋಕ್
Team Udayavani, Dec 9, 2019, 3:02 AM IST
ಹೆಬ್ರಿ: ಇನ್ನು ಮುಂದೆ ವೃದ್ಧಾಪ್ಯವೇತನ ಪಡೆಯಲು ತಾಲೂಕು ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಸರಕಾರವೇ ದಾಖಲೆಗಳನ್ನು ಪರಿಶೀಲಿಸಿ ಅರ್ಹರ ಮನೆಬಾಗಿಲಿಗೆ ಬಂದು ವೃದ್ಧಾಪ್ಯ ವೇತನ ಮತ್ತಿತರ ಮಾಸಾಶನಗಳನ್ನು ನೀಡಲಿದೆ. ಈ ಯೋಜನೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡು ನಂತರ ರಾಜ್ಯವ್ಯಾಪಿಯಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಭಾನುವಾರ ಅವರು 10 ಕೋಟಿ ರೂ.ವೆಚ್ಚದ ಹೆಬ್ರಿ ತಾಲೂಕು ಮಿನಿ ವಿಧಾನಸೌಧ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.