ಸಿಎಎಯಿಂದ ಯಾರಿಗೂ ತೊಂದರೆ ಇಲ್ಲ
Team Udayavani, Feb 5, 2020, 3:04 AM IST
ಶಹಾಪುರ: “ಸಿಎಎಯಿಂದ ದೇಶದ ಯಾವುದೇ ಸಮುದಾಯಕ್ಕೆ ತೊಂದರೆ ಯಾಗಲ್ಲ. ತೊಂದರೆ ಯಾದಲ್ಲಿ ನಾನೇ ಮೊದಲು ಅವರ ಪರವಾಗಿ ನಿಲ್ಲಲ್ಲಿದ್ದೇನೆ’ ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಎ ಬಗ್ಗೆ ಬಹಳಷ್ಟು ಜನರಿಗೆ ತಿಳಿವಳಿಕೆ ಕಡಿಮೆ ಇದೆ. ಅದರಿಂದ ದೇಶಕ್ಕೆ ದೇಶದ ಜನರಿಗೆ ಯಾವುದೇ ತೊಂದರೆ ಇಲ್ಲ.
ಈ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಿದೆ. ಯಾವುದೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಿಎಎ ಕುರಿತು ಆಂದೋಲನಕಾರರು, ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಆತಂಕ ದೂರ ಮಾಡಿಕೊಳ್ಳಬಹುದು. ಜನರ ನಡುವೆ ಸಂಪರ್ಕ ಇಲ್ಲದ್ದರಿಂದ ಹೀಗಾಗಿದೆ. ಎಲ್ಲಾ ವಿಷಯ ಕುರಿತು ವಿನಿಮಯ ಮಾಡಿಕೊಂಡಲ್ಲಿ ದುಗುಡ ದೂರಾಗಲಿದೆ ಎಂಬುದು ನನ್ನ ಭಾವನೆ ಎಂದರು.
ಹೊರ ದೇಶಗಳಲ್ಲಿ ಇದೇ ಸಿಎಎ ತರಹ ಕಾನೂನು ಜಾರಿ ಮಾಡಿ ನಮ್ಮ ದೇಶದವರನ್ನು ಹೊರ ದಬ್ಬಲಿದ್ದಾರೆ ಎಂಬ ಆತಂಕದ ಸುದ್ದಿ ಹಬ್ಬಿದೆ ಎಂದು ಪ್ರಶ್ನಿಸಿದಾಗ, ಈ ಕುರಿತು “ನಾನು ಎಲ್ಲೂ ಕೇಳಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ಹೊರ ದೇಶದಲ್ಲಿ ನಮ್ಮ ದೇಶದಲ್ಲಿ ಮಾಡಿದ ಕಾನೂನು ಮಾಡುತ್ತಾರೆ ಎಂಬ ಬಗ್ಗೆ ನನ್ನ ಅರಿವಿಗೆ ಇಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ