ಅಂಬರೀಷ್ ಸೀರಿಯಸ್ನೆಸ್ ಇಲ್ಲದ ರಾಜಕಾರಣಿ: ಕಾಗೋಡು
Team Udayavani, Mar 8, 2017, 7:37 AM IST
ಬೆಂಗಳೂರು: ಮಾಜಿ ಸಚಿವ ಅಂಬರೀಷ್ ಕಾಂಗ್ರೆಸ್ ಬಿಟ್ಟು ಹೋದರೆ, ಪಕ್ಷಕ್ಕೆ ಯಾವ ತೊಂದರೆಯೂ ಆಗಲ್ಲ. ಏಕೆಂದರೆ ಅವರೊಬ್ಬ “ಸೀರಿಯೆಸ್ನೆಸ್’ ಇಲ್ಲದ ರಾಜಕಾರಣಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಗೋಡು, ಅಂಬರೀಷ್ ಸೀರಿಯೆಸ್ನೆಸ್ ಇಲ್ಲದ ರಾಜಕಾರಣಿ. ಈ ಮಾತನ್ನು ಹಿಂದೇ ನಾನೇ ಅವರಿಗೆ ಹೇಳಿದ್ದೆ ಎಂದರು. ಸೀರಿಯಸ್ ರಾಜಕಾರಣ ಮಾಡಿದರೆ ಆತ (ಅಂಬರೀಷ್) ತುಂಬಾ ಒಳ್ಳೆಯ ರಾಜಕಾರಣಿ ಆಗಬಲ್ಲ. ಸೀರಿಯಸ್ ಆಗಿ ರಾಜಕಾರಣ ಮಾಡಿ, ನಿಮ್ಮನ್ನು ಹಿಡಿಯುವವರು ಯಾರೂ ಇರಲ್ಲ ಎಂದು ಹೇಳಿದ್ದೆ.
ದುರಂತ ಎಂದರೆ ಅಂಬರೀಷ್ ರಾಜಕೀಯ ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ಬೆಳಗ್ಗೆ 8 ಗಂಟೆಗೆ ಎದ್ದು ತಿಂಡಿ ತಿಂದು ಕ್ಷೇತ್ರಕ್ಕೆ ಹೊರಡಲಿ. ಬೇಕಾದ್ರೆ ನಾನೂ ಜೊತೆಗೆ ಹೋಗ್ತೀನೆ. ಅವರಿಗೆ ಅಧಿಕಾರ ಯಾಕೆ ಸಿಗಲ್ಲ ನೋಡೋಣ ಎಂದು ಹೇಳಿದರು.
“ರಾಜಕೀಯ ಮಾಡಲು ಚೆನ್ನಾಗಿ ದುಡಿಯಬೇಕು, ಕುಮಾರ್ ಬಂಗಾರಪ್ಪ ಬಗ್ಗೆ ಅವರಪ್ಪನೇ ಚೆನ್ನಾಗಿ ಹೇಳಿದ್ದ. ತಂದೆ-ತಾಯಿಯನ್ನು
ಮನೆಯಿಂದ ಹೊರಗೆ ಹಾಕಿದವರು ಯಾರು? ಅವನ (ಕುಮಾರ್ ಬಂಗಾರಪ್ಪ) ಬೆಳವಣಿಗೆ ತಡೆಯಲು ನಾನ್ಯಾರು? ದ್ವೇಷ ಮಾಡಿ
ನಾನೇನು ಅವನ ಆಸ್ತಿ ಕಿತ್ತುಕೊಳ್ಳಬೇಕೇ?
ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ