ಕರ್ನಾಟಕಕ್ಕೆ ವಿದ್ಯುತ್ ಪೂರೈಕೆ ನಿಯಂತ್ರಿಸಲಿರುವ ಎನ್ಟಿಪಿಸಿ
Team Udayavani, Feb 6, 2019, 1:12 AM IST
ನವದೆಹಲಿ: ಕಳೆದ 60 ದಿನಗಳಿಂದಲೂ ವಿದ್ಯುತ್ ಬಿಲ್ ಪಾವತಿ ಮಾಡದ ಕರ್ನಾ ಟಕಕ್ಕೆ ವಿದ್ಯುತ್ ಸರಬರಾಜು ನಿಯಂತ್ರಿಸಲು ಎನ್ಟಿಪಿಸಿ ನಿರ್ಧರಿಸಿದೆ. ಇದೇ ವೇಳೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೂ ವಿದ್ಯುತ್ ನಿಯಂತ್ರಣ ಕ್ರಮ ಜಾರಿಗೆ ಬರಲಿದೆ. ಸುಮಾರು 4138 ಕೋಟಿ ರೂ. ಬಾಕಿಯನ್ನು ರಾಜ್ಯಗಳು ಉಳಿಸಿಕೊಂಡಿದ್ದು, ವಿದ್ಯುತ್ ವಿತರಣೆ ಕಂಪನಿಗಳಿಂದ ಈ ಮೊತ್ತ ಪಾವತಿಯಾಗಬೇಕಿತ್ತು. ಹೀಗಾಗಿ 3470 ಮೆ.ವ್ಯಾ ವಿದ್ಯುತ್ ಕಡಿಮೆ ಒದಗಿಸಲು ಎನ್ಟಿಪಿಸಿ ನಿರ್ಧರಿಸಿದೆ. ಸಿಇಆರ್ಸಿ ಮಾರ್ಗಸೂಚಿಯ ಪ್ರಕಾರ ವಿದ್ಯುತ್ ಪೂರೈಕೆಯನ್ನು ನಿಯಂತ್ರಿಸಲು ನಿರ್ಧರಿಸ ಲಾಗಿದೆ ಎಂದು ಎನ್ಟಿಪಿಸಿ ತಿಳಿಸಿದೆ. ಸಂಪೂರ್ಣ ಮೊತ್ತ ಪಾವತಿ ನಂತರ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ. ಸೌರ ಹಾಗೂ ಜಲವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದು, ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದೆ.
ರಾಮಗುಂಡಂ, ಸಿಂಹಾದ್ರ, ತಲಚೇರಿ ಮತ್ತು ಕೂಡಗಿ ವಿದ್ಯುತ್ ಘಟಕಗಳಿಂದ ಮೂರೂ ರಾಜ್ಯಗಳಿಗೆ ವಿದ್ಯುತ್ ಸರಬ ರಾಜಾಗುತ್ತಿದ್ದು, ಒಟ್ಟು 3470 ಮೆ.ವ್ಯಾ ವಿದ್ಯುತ್ ಕಡಿಮೆ ಮಾಡಲಾಗುತ್ತದೆ. ಇದು ಫೆ.6 ರಂದು ಜಾರಿಗೆ ಬರಲಿದೆ. ಬಾಕಿ ಪಾವತಿಯವರೆಗೆ ಅಥವಾ ಮುಂದಿನ 3 ತಿಂಗಳ ಕಾಲ ಇದು ಜಾರಿಯಲ್ಲಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ