ಸಂತ್ರಸ್ತರಿಗೆ ಬಾಡಿಗೆ ಮನೆ ಕಲ್ಪಿಸಿದ ಅಧಿಕಾರಿಗಳು
Team Udayavani, Aug 22, 2019, 3:00 AM IST
ಹಾವೇರಿ: ನೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸವಣೂರು ತಾಲೂಕಿನ ಕುಣಿಮೆಳ್ಳಳ್ಳಿ ಗ್ರಾಮದಲ್ಲಿ ಅಧಿಕಾರಿಗಳು ಬಾಡಿಗೆ ಮನೆ ಕಲ್ಪಿಸಿದ್ದಾರೆ. ಪ್ರಸ್ತುತ ಮಳೆ ಹಾಗೂ ನೆರೆ ಕಡಿಮೆ ಯಾಗಿದ್ದು, ಶಾಲೆಗಳು ಸಹ ಪ್ರಾರಂಭ ವಾಗಿವೆ. ಹೀಗಾಗಿ, ಗ್ರಾಮದ ಒಂದು ಗುಂಪು ಶಾಲೆಯಲ್ಲಿನ ಪರಿಹಾರ ಕೇಂದ್ರ ಬಂದ್ ಮಾಡಿ ಮಕ್ಕಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತಿತ್ತು. ಗ್ರಾಮದ ಇನ್ನೊಂದು ಗುಂಪು ಪರಿಹಾರ ಕೇಂದ್ರ ಬಂದ್ ಮಾಡಬಾರದು.
ಸಂತ್ರಸ್ತರಿಗೆ ನೆಲೆ ಕಲ್ಪಿಸುವವರೆಗೂ ಅಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಡ ಹೇರಿತ್ತು. ಈ ಎರಡೂ ಗುಂಪುಗಳ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು, ಕೊನೆಗೆ ಸಂತ್ರಸ್ತರಿಗೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಕುಣಿಮೆಳ್ಳಳ್ಳಿ ಗ್ರಾಮದ 15 ಕುಟುಂಬಗಳು ಸರ್ಕಾರಿ ಶಾಲೆಯಲ್ಲಿ ತೆರೆದ ಪರಿಹಾರ ಕೇಂದ್ರದಲ್ಲಿ ನೆಲೆಸಿದ್ದವು. ನೆರೆ ಇಳಿದ ಮೇಲೆ ಕೆಲವರು ಮನೆಗೆ ಹೋಗಿದ್ದರು. ಏಳು ಕುಟುಂಬಗಳ ಮನೆ ಸಂಪೂರ್ಣ ಬಿದ್ದಿತ್ತು.
ಸರ್ಕಾರ ಐದು ಸಾವಿರ ರೂ.ಗಳಂತೆ 10 ತಿಂಗಳು ಬಾಡಿಗೆ ಕೊಡುವುದಾಗಿ ಘೋಷಿಸಿದ್ದು, ಕುಣಿಮೆಳ್ಳಳ್ಳಿ ಪರಿಹಾರ ಕೇಂದ್ರದಲ್ಲಿದ್ದ 5 ಕುಟುಂಬಗಳನ್ನು ಬಾಡಿಗೆ ಮನೆಗೆ ಕಳುಹಿಸಲಾಗಿದೆ.
-ವಿಜಯಕುಮಾರ ಸಜ್ಜನರ, ಸವಣೂರು ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
MUST WATCH
ಹೊಸ ಸೇರ್ಪಡೆ
ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
Yugadi: ವರುಷದ ಆದಿ ಯುಗಾದಿ
U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ