ಆನ್ಲೈನ್ ಅರ್ಜಿ; ಮನೆಗೆ ಬರಲಿದೆ ಎಸೆಸೆಲ್ಸಿ ಅಂಕಪಟ್ಟಿ
Team Udayavani, Dec 21, 2020, 6:13 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸೆಸೆಲ್ಸಿ ಅಂಕಪಟ್ಟಿ ಕಳೆದುಹೋದರೆ ಹೊಸ ಪ್ರತಿ ಪಡೆಯುವುದಕ್ಕೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸುಲಭ ವಿಧಾನ ಸಿದ್ಧಪಡಿಸಿದೆ. ಇನ್ನು ಮುಂದೆ ಅಂಕಪಟ್ಟಿಯ ನಕಲು ಪ್ರತಿಗೆ ಆನ್ಲೈನ್ ಮೂಲಕ ಅರ್ಜಿ ಪಡೆದು, ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಅದು ರೂಪಿಸಿದೆ.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿ ಪೂರ್ಣ ದಾಖಲೆಗಳೊಂದಿಗೆ ವ್ಯಾಸಂಗ ಮಾಡಿದ ಪ್ರೌಢಶಾಲೆಯ ಮೂಲಕವೇ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಬಾರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಇದು ಮೂರು ಬಾರಿ ಅಂಕಪಟ್ಟಿ ಕಳೆದುಹೋದ ಸಂದರ್ಭದಲ್ಲಿ. ಈಗ ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಅಂಕಪಟ್ಟಿಯಲ್ಲಿ ನಮೂದಾಗಿರುವ ಪಾಲಕ, ಪೋಷಕರೂ ಅರ್ಜಿ ಸಲ್ಲಿಸಬಹುದಾಗಿದೆ.
ಆಧಾರ್ ಕಡ್ಡಾಯ
ಅಂಕಪಟ್ಟಿಯ ನಕಲು ಪ್ರತಿ ಪಡೆಯಲು ಅಭ್ಯರ್ಥಿಗಳು ಆಧಾರ್ ನೀಡುವುದು ಕಡ್ಡಾಯ. ಅಂಕಪಟ್ಟಿ ಕಳೆದು ಹೋಗಿರುವ ಬಗ್ಗೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಾಗಿತ್ತು. ಈಗ ಅದು ಅಗತ್ಯವಿಲ್ಲ. ಬದಲಾಗಿ ಮಂಡಳಿಯ ಅಫಿಡವಿಟ್ ಭರ್ತಿ ಮಾಡಿ ಆನ್ಲೈನ್ ಮೂಲಕ ಸಲ್ಲಿಸಬೇಕು. ಮೂಲ ಅಂಕಪಟ್ಟಿಯ ಪ್ರತಿ ಲಭ್ಯವಿದ್ದಲ್ಲಿ ಅದು, ಆಧಾರ್ ಕಾರ್ಡ್, ಅಫಿಡವಿಟ್ ಪ್ರತಿಗಳನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಿ, ಆನ್ಲೈನ್ ಶುಲಪಾವತಿಸಿ, ಅಂಕಪಟ್ಟಿ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಅರ್ಜಿ ಸಲ್ಲಿಕೆ ಹೇಗೆ?
http://kseeb.kar.nic.in/ ಗೆ ಭೇಟಿ ನೀಡಬೇಕು.
– “ಆನ್ಲೈನ್ ಸೇವೆಗಳು’ ಆಯ್ಕೆ ಕ್ಲಿಕ್ ಮಾಡಬೇಕು. ಆಗ ಎಸೆಸೆಲ್ಸಿ ಮತ್ತು ಇತರ ಪರೀಕ್ಷೆ ಎಂಬ ಆಯ್ಕೆಗಳು ಬರುತ್ತವೆ.
– ಎಸೆಸೆಲ್ಸಿ ಆಯ್ಕೆಯಲ್ಲೇ ಮುಂದುವರಿದರೆ, ಅಂಕಪಟ್ಟಿಗೆ ಅರ್ಜಿ ಸಲ್ಲಿಸುವ ಇನ್ನೊಂದು ಆಯ್ಕೆ ಸಿಗುತ್ತದೆ.
– ಕ್ಲಿಕ್ ಮಾಡುತ್ತಿದ್ದಂತೆ ಹೊಸ ಪುಟ ತೆರೆದುಕೊಳ್ಳುತ್ತದೆ.
– ನಕಲು ಅಂಕ ಪಟ್ಟಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರವಾದ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ.
– ಪಕ್ಕದಲ್ಲೇ ಅರ್ಜಿ(ಅಪ್ಲಿಕೇಷನ್) ಕಾಲಂ ಸಿಗುತ್ತದೆ. ಅದನ್ನು ಭರ್ತಿ ಮಾಡಿದ ಅನಂತರ ದಾಖಲಾತಿ ಅಪ್ಲೋಡ್, ಶುಲ್ಕ ಪಾವತಿ, ಅರ್ಜಿ ಪರಿಶೀಲನೆ ಮತ್ತು ಸಲ್ಲಿಸಬಹುದಾಗಿದೆ.
ಅಭ್ಯರ್ಥಿಯ ಸಲ್ಲಿಸಿರುವ ಮನವಿಯು ಆಯಾ ವಿಭಾಗಕ್ಕೆ ಹೋಗುತ್ತದೆ. ಅಂಕಪಟ್ಟಿ ಕಳೆದು ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಬೇಕಾಗಿಲ್ಲ. ಬದಲಿಗೆ ಮಂಡಳಿಯ ಅಫಿಡವಿಟ್ ಭರ್ತಿ ಮಾಡಿ, ಸಲ್ಲಿಸಬೇಕು. ನಕಲು ಅಂಕಪಟ್ಟಿ ಅರ್ಜಿಯನ್ನು ಭೌತಿಕವಾಗಿ ಪಡೆಯುವುದನ್ನು ನಿಲ್ಲಿಸಿ, ಆನ್ಲೈನ್ ಮೂಲಕವೇ ಪಡೆಯಲಿದ್ದೇವೆ.
-ವಿ. ಸುಮಂಗಲಾ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ