ಬಚಾವ್; ಶೃಂಗೇರಿಯ ಮನೆಯೊಂದರಲ್ಲಿ ಆಪರೇಶನ್ “ಡೆಡ್ಲಿ ಕಾಳಿಂಗ”! Watch
Team Udayavani, Nov 21, 2018, 4:44 PM IST
ಶೃಂಗೇರಿ: ನಾಗರಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಅದರಲ್ಲೂ ನಮಗಿಂತ ಎರಡು ಪಟ್ಟು ಉದ್ದದ ಕಾಳಿಂಗ ಸರ್ಪ ಮನೆಯ ಹತ್ತಿರ ಬಂದರೆ ಪರಿಸ್ಥಿತಿ ಹೇಗಾಗಬಹುದು ಊಹಿಸಿ. ಹೀಗೆ ಶೃಂಗೇರಿಯ ಮನೆಯೊಂದಕ್ಕೆ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದರ ರೋಷ ಹೇಗಿದೆ ಎಂಬುದು ತಿಳಿಯುತ್ತೆ.
ಶೃಂಗೇರಿ ಸಮೀಪದ ಬೊಂಬಾಲಪುರ ವಿನಯ್ ಅವರ ಮನೆಗೆ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿ ಬಿಟ್ಟಿತ್ತು. ಕಳೆದ 4 ದಿನಗಳಿಂದ ಠಿಕಾಣಿ ಹೂಡಿದ್ದ “ಕಾಳಿಂಗ”ನನ್ನು ಹಿಡಿಯಲು ಸ್ನೇಕ್ ಅರ್ಜುನ್ ಅವರು ಪ್ರಯತ್ನಪಡುತ್ತಿದ್ದಾಗಲೇ ಎರಡು ಬಾರಿ ಕಾಳಿಂಗ ತಿರುಗಿ ಕಚ್ಚಲು ಮುಂದಾಗಿತ್ತು.
ಆದರೆ ಧೈರ್ಯ ಕಳೆದುಕೊಳ್ಳದ ಅರ್ಜುನ್ ಅಪಾಯ ಅರಿತು ಕಾಳಿಂಗನನ್ನು ಕೈಬಿಡುವ ಮೂಲಕ ಬಚಾವ್ ಆಗಿದ್ದಾರೆ. ಅಂತೂ ಕೊನೆಗೂ ಛಲಬಿಡದೆ ಕಾಳಿಂಗನನ್ನು ಪೈಪ್ ಒಳಗೆ ಸೇರಿಸಲು ಯಶಸ್ವಿಯಾಗಿ, ಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ