ಸಚಿವ ನಿರಾಣಿ ವಿರುದ್ಧ ಪಾಷಾ ಸಿಡಿ ಆರೋಪ : ಸಿಬಿಐ ತನಿಖೆಗೆ ಯತ್ನಾಳ್ ಆಗ್ರಹ
Team Udayavani, Jul 20, 2021, 3:22 PM IST
ವಿಜಯಪುರ : ಗಣಿ ಸಚಿವ ಮುರುಗೇಶ ನಿರಾಣಿ ಬಳಿ 1000 ಸಿಡಿ ಇವೆ ಎಂದು ಆಲಂ ಪಾಷಾ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ಕಾರಣ ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿ.ಡಿ. ವಿಚಾರವಾಗಿ ಗಂಭೀರ ಆರೋಪವಿದ್ದರೆ ಅದರಿಂದ ತನಿಖೆ ನಡೆಸಿ, ಆರೋಪ ಮುಕ್ತರಾಬೇಕು. ಇಲ್ಲವಾದರೆ ಸಚಿವ ಸ್ಥಾನದಲ್ಲಿ ಇರಲು ಹಾಗೂ ಸಿಎಂ ಹುದ್ದೆಗಾಗಿ ದೊಡ್ಡ ಪ್ರಮಾಣದಲ್ಲಿ ಅಮೀಷ ಒಡ್ಡಿದ್ದಕ್ಕೆ, ಪದೇ ಪದೆ ದೆಹಲಿಗೆ ಓಡಾಡುವ ಕುರಿತು ಮಾಹಿತಿ ಇದೆ. ಪಂಚಮಸಾಲಿ 2-ಎ ಮೀಸಲು ಹೋರಾಟ ಅಸ್ಥಿರಗೊಳಿಸಿ, ಹೋರಾಟ ವಿಫಲಗೊಳಿಸಲು ಸಚಿವ ನಿರಾಣಿ ಪ್ರಯತ್ನ ಮಾಡಿದ್ದರು. ಇದು ನಾಡಿನ ಜನತೆಗೆ ಗೊತ್ತಿದೆ. ಹೀಗಾಗಿ ಸಿ.ಎಂ. ಪಾರದರ್ಶಕ ತನಿಖೆಗಾಗಿ ಸಿಬಿಐ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಮುರುಗೇಶ ನಿರಾಣಿ ಸೌಹಾರ್ಧ ಸಹಕಾರಿ ಹೆಸರಲ್ಲಿ ಮೋಸವಾಗಿದೆ 40 ಕೋಟಿ ರೂ. ಹಗರಣವಿದೆ. ಈಗ ಸೌಹಾರ್ಧ ಸಹಕಾರಿ ನನ್ನದಲ್ಲ ಎಂದು ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾಗಿ ಹೇಳುತ್ತಾರೆ. ನಿಮ್ಮ ಹೆಸರಲ್ಲಿ ಸೌಹಾರ್ಧ ಸಹಕಾರಿ ಬೇಡವೆಂದು ನಿರಾಣಿಗೆ ಹಿಂದೆಯೇ ಹೇಳಿದ್ದೆ. ಆಗ ನನ್ನ ಮಾತು ಕೇಳಲಿಲ್ಲ, ಜಿಲ್ಲೆಯ ಜನರು ಮುರುಗೇಶ ನಿರಾಣಿ ಹೆಸರನ್ನು ನಂಬಿ ಹಣ ಇಟ್ಟಿದ್ದರು. ಸುಮಾರು 40 ಕೋಟಿ ರೂ. ಹಗರಣವಾಗಿದೆ. ಹಗರಣ ಹೊರ ಬರುತ್ತಲೇ ಇದು ನನ್ನದಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಸಚಿವ ನಿರಾಣಿ ವಿರುದ್ದ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್
Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್
Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್