‘ಲೋಕಾಂತಕ್ಕೆ ಗಾಂಧಿ ಬಜಾರು;ಏಕಾಂತಕ್ಕೆ ಲಾಲ್ ಬಾಗ್’ ಕವಿ ನಿಸಾರ್ ಅವರ ಸ್ಪೂರ್ತಿ ಸ್ಥಳಗಳು


Team Udayavani, May 3, 2020, 4:28 PM IST

‘ಲೋಕಾಂತಕ್ಕೆ ಗಾಂಧಿ ಬಜಾರು;ಏಕಾಂತಕ್ಕೆ ಲಾಲ್ ಬಾಗ್’ ಕವಿ ನಿಸಾರ್ ಅವರ ಸ್ಪೂರ್ತಿ ಸ್ಥಳಗಳು

ಬೆಂಗಳೂರು: ಇಂದು ನಮ್ಮನ್ನಗಲಿದ ಕವಿ ಪದ್ಮಶ್ರೀ ಕೆ.ಎಸ್. ನಿಸಾರ್ ಅಹಮ್ಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಸಿದರು. ಆದರೆ 1941ರಲ್ಲಿ ನಿಸಾರ್ ಅಹಮ್ಮದ್ ಮತ್ತು ಅವರ ಸಹೋದರನನ್ನು ಬೆಂಗಳೂರಿನ ಹೃದಯಭಾಗದ ಲಾಲ್ ಬಾಗ್ ಸಮೀಪ ಇರುವ ದೊಡ್ಡಾಲದಮರ ಎಂಬಲ್ಲಿದ್ದ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲಾಗಿತ್ತು.

ಇದು ನಿಸಾರ್ ಅವರೊಳಗಿದ್ದ ಕವಿ ಮನಸ್ಸನ್ನು ಎಳವೆಯಲ್ಲೇ ಪ್ರಭಾವಿಸಲು ಕಾರಣವಾಯ್ತು ಎಂಬುದನ್ನು ಸ್ವತಃ ನಿಸಾರ್ ಅಹಮದ್ ಅವರೇ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

ಶಾಲಾ ಬಾಲಕನಾಗಿದ್ದ ಸಂದರ್ಭದಲ್ಲಿ ಲಾಲ್ ಬಾಗ್ ನಿಸಾರ್ ಮತ್ತು ಅವರ ಸ್ನೇಹಿತರ ನೆಚ್ಚಿನ ಆಟದ ಸ್ಥಳವಾಗಿತ್ತು. ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಇವರೆಲ್ಲಾ ಪಕ್ಕದಲ್ಲಿದ್ದ ಲಾಲ್ ಬಾಗ್ ಗೆ ಬಂದು ಇವರೆಲ್ಲಾ ಆಡತೊಡಗಿದರೆಂದರೆ ಹೊತ್ತು ಕಂತುತ್ತಿರುವುದೇ ತಿಳಿಯುತ್ತಿರಲಿಲ್ಲವಂತೆ.

ಬಳಿಕವೂ ನಿಸಾರ್ ಅವರ ಲಾಲ್ ಬಾಗ್ ನಂಟು ಅವರ ಇಳಿ ವಯಸ್ಸಿನವರೆಗೂ ಮುಂದುವರೆದಿತ್ತು. ಅವರೇ ಹೇಳಿಕೊಂಡಿರುವಂತೆ ಏಕಾಂತ ಬಯಸುವ ಕವಿ ಮನಸ್ಸಿಗೆ ಲಾಲ್ ಬಾಗ್ ಅತ್ಯಂತ ನೆಚ್ಚಿನ ಸ್ಥಳವಾಗಿತ್ತಂತೆ ಹಾಗೂ ತಮ್ಮ ಕವಿತೆಗಳಿಗೆ ಮತ್ತು ಬರಹಗಳಿಗೆ ಅಗತ್ಯವಿದ್ದ ವಿಷಯ ಸಂಗ್ರಹಕ್ಕೆ ಬೆಂಗಳೂರಿನ ಗಾಂಧಿ ಬಜಾರ್ ಪ್ರಶಸ್ತ ಸ್ಥಳವಾಗಿತ್ತು ಎಂಬುದನ್ನು ನಿತ್ಯೋತ್ಸವದ ಕವಿ ತಮ್ಮ ಹಲವಾರು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಏಕಾಂತಕ್ಕೆ ಲಾಲ್ ಬಾಗ್ ಹಾಗೂ ಲೋಕಾಂತಕ್ಕೆ ಗಾಂಧಿ ಬಜಾರ್ ಎಂಬ ಮಾತನ್ನು ಕವಿ ನಿಸಾರ್ ಅಹಮದ್ ಅವರು ಪ್ರತೀ ಬಾರಿ ಹೇಳಿಕೊಳ್ಳುತ್ತಿದ್ದರು. ಹಾಗಾಗಿಯೇ ಲಾಲ್ ಬಾಗ್ ಸಹವಾಸದಿಂದ ‘ನಿತ್ಯೋತ್ಸವ’ದಂತಹ ಕವಿತೆಗಳು ಮತ್ತು ಗಾಂಧಿ ಜಜಾರ್ ಸಂಸರ್ಗದಿಂದ ‘ಮನಸು ಗಾಂಧಿ ಜಜಾರ್’ನಂತಹ ಕವನಗಳು ಪದ್ಮಶ್ರೀ ವಿಜೇತ ನಿಸಾರ್ ಅಹಮ್ಮದ್ ಅವರ ಲೇಖನಿಯಿಂದ ಕನ್ನಡಿಗರಿಗೆ ಲಭಿಸಿತು ಎಂದು ತಿಳಿದುಕೊಳ್ಳಲಡ್ಡಿಯಿಲ್ಲ.

ಲಾಲ್ ಬಾಗ್, ಗಾಂಧಿ ಬಜಾರ್ ಹಾಗೂ ಶಿವಮೊಗ್ಗ ತಮ್ಮ ಬಹುತೇಕ ಕವಿತೆಗಳಿಗೆ ಸ್ಪೂರ್ತಿ ತುಂಬಿದ ಸ್ಥಳಗಳು ಎಂಬುದನ್ನು ನಿಸಾರ್ ಅವರು ಹಲವು ಬಾರಿ ನೆನಪಿಸಿಕೊಳ್ಳುತ್ತಿದ್ದರು.

ಸಂಗ್ರಹ: ಹರಿಪ್ರಸಾದ್

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.