ಫಲಿತಾಂಶಕ್ಕೂ ಮುನ್ನ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯ ಶಾಕ್ ?
Team Udayavani, May 13, 2018, 4:27 PM IST
ಬೆಂಗಳೂರು: ಚುನಾವಣೆ ಮುಗಿದ ಫಲಿತಾಂಶ ,ಹೊಸ ಸರ್ಕಾರದ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ಮತ ಏಣಿಕೆಯಾಗುವ ಮುನ್ನವೇ ಕರೆಂಟ್ ಶಾಕ್ ಆಗುವ ಸಾಧ್ಯತೆಗಳು ದಟ್ಟವಾಗಿದೆ.
ವಿದ್ಯುತ್ ದರವನ್ನು ಹೆಚ್ಚಳ ಮಾಡಲು ಕೆಇಆರ್ಸಿ(Karnataka Electricity Regulatory Commission) ಮುಂದಾಗಿದ್ದು, ದರ ಹೆಚ್ಚಳಕ್ಕೆ ಎಲ್ಲಾ ಎಸ್ಕಾಂಗಳು ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದ ಕೆಇಆರ್ಸಿ ನಾಳೆ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆಯ ಬಗ್ಗೆ ಪ್ರಕಟಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಯೂನಿಟ್ಗೆ 83 ಪೈಸೆಯಿಂದ 1.10 ರೂ ಹೆಚ್ಚಳ ಮಾಡುವ ಸಾದ್ಯತೆಗಳಿವೆ ಎನ್ನಲಾಗಿದೆ.