ಪ್ರಶಂಸೆ ಬೇಕಿಲ್ಲದಷ್ಟು ದೊಡ್ಡ ಸಾಧನೆ
Team Udayavani, Jan 22, 2019, 12:50 AM IST
ಸಿದ್ಧಗಂಗಾ ಕ್ಷೇತ್ರಕ್ಕೆ ನೂರು ಪಾಲು ವೈಭವ ಉಂಟಾಗುವ ಶಕ್ತಿ ಬಂದುದು ಈ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾರ, ವಿಶಾಲ ದೃಷ್ಟಿಯಿಂದ. ಸಾವಿರಾರು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ, ಭಾವೀ ಜೀವನ ವಿಕಾಸದ ಒಂದು ಬೃಹತ್ ಕ್ಷೇತ್ರವಾದುದು ಇಲ್ಲಿನ ಸ್ವಾಮೀಜಿಯವರ ಅನುಗ್ರಹದಿಂದ.
ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನದ ದಾನವನ್ನೂ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರಿಗೆ ಇಹದ ಆವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ, ಅವರ ಪರವನ್ನು ಸಹ ಈ ನಾಡಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮಭೂಮಿ ಇದಾಗಿದೆ. ಈ ಸಂಸ್ಥೆಯು ನಮ್ಮ ನಾಡಿನ ವೀರಶೈವ ಪಂಥಿಯರ ಸಂಸ್ಥೆಯಾದರೂ, ಯಾವೊಂದು ಜಾತಿ, ಮತದ ತಾರತಮ್ಯ ತೋರಿಸದೇ, ವಿದ್ಯಾರ್ಥಿಗಳ ಪೋಷಣೆ, ಶಿಕ್ಷಣ, ಭಾವನೆಗಳನ್ನು ಬೆಳೆಸುತ್ತಾ ಬಂದಿದೆ. ಎಲ್ಲೆಲ್ಲಿ ಸಾರ್ವಜನಿಕ ಸಂಸ್ಥೆಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಕಂಡು ಬರುತ್ತವೆಯೋ, ಅವುಗಳ ಬಗ್ಗೆ ನಾನೇ ಆಗಲಿ, ನನ್ನಂಥವರಾಗಲೀ, ಸಂತೋಷ ಪಡಲೇಬೇಕು. ಸಂಸ್ಥೆಗಳ ಇಂಥ ಸಾರ್ವಜನಿಕ ಸೇವೆಯ ಬಗ್ಗೆ ನಾನು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಉಲ್ಲೇಖೀಸಿದ್ದೇನೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ, ಅನ್ಯಮತೀಯ ಸಂಸ್ಥೆಗಳನ್ನು ನೋಡುವಾಗ, ಅವುಗಳ ಸ್ವಾರ್ಥಪರ, ಮತೀಯ ಸಂಕುಚಿತ ದೃಷ್ಟಿ ತಮ್ಮ ಪೋಷಣೆಯನ್ನು ಕೇವಲ ಸ್ವಪಂಥೀಯರ ಸಲುವಾಗಿ ಮಾತ್ರ ಉಳಿಸಿಕೊಂಡಿರುವುದನ್ನು ಕಾಣಬಹುದು. ಶ್ರೀ ಕ್ಷೇತ್ರದ ಸಾಧನೆಗೆ ನನ್ನಂಥ ಲೇಖಕನ ಪ್ರಶಂಸೆ ಬೇಕಾಗಿಯೇ ಇಲ್ಲ ಎಂಬಷ್ಟು ದೊಡ್ಡ ಸಾಧನೆ ಶ್ರೀಗಳದ್ದು.
– ಕೆ. ಶಿವರಾಮ ಕಾರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ