ಪ್ರಧಾನಿ ‘ಪರೀಕ್ಷಾ ಪೇ ಚರ್ಚಾ’ಕ್ಕೆ ನವ್ಯಶ್ರೀ ಆಯ್ಕೆ
Team Udayavani, Jan 25, 2019, 12:43 AM IST
ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ನವದೆಹಲಿಯಲ್ಲಿ ಜ.29ರಂದು ಪ್ರಧಾನಿ ಜತೆ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ತಾಲೂಕಿನ ಆರ್.ಎಸ್.ನವ್ಯಶ್ರೀ ಆಯ್ಕೆಯಾಗಿದ್ದಾಳೆ. ತಾಲೂಕಿನ ದೇವರಗುಡಿಪಲ್ಲಿ ಆದರ್ಶ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನವ್ಯಶ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮುಖ್ಯಶಿಕ್ಷಕ ಎನ್.ವಿ.ಭೈರೆಡ್ಡಿ ಸೇರಿದಂತೆ ಶಾಲಾ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.