ಹಂಸಲೇಖ ಹೇಳಿದ್ದರಲ್ಲಿ ತಪ್ಪೇನಿಲ್ಲ: ಪ್ರಿಯಾಂಕ್ ಖರ್ಗೆ
Team Udayavani, Nov 25, 2021, 3:37 PM IST
ಬೆಂಗಳೂರು: ಹಂಸಲೇಖ ಹೇಳಿದ್ದರಲ್ಲಿ ತಪ್ಪೇನಿಲ್ಲ.ಕೆಲವು ಮನುವಾದಿಗಳು ಸಂವಿಧಾನದ ವಿರುದ್ಧವಿದ್ದಾರೆ. ಅವರು ವಿರೋಧ ಮಾಡಿಯೇ ಮಾಡುತ್ತಾರೆ. ಎಲ್ಲಿಯವರೆಗೆ ಮನುವಾದಿ ಸಂಸ್ಕೃತಿ ಇರುತ್ತದೋ ಅಲ್ಲಿಯವರೆಗೆ ವಿರೋಧ ಇರುತ್ತದೆ ಎಂದು ಹಂಸಲೇಖ ಪರವಾಗಿ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಲ ಕಸುಬಿನ ಪ್ರಕಾರ ಆಹಾರ ಪದ್ದತಿ ಇರುತ್ತದೆ. ಆದರೆ ಇಂತಹದ್ದೇ ಆಹಾರ ಸೇವಿಸಿ ಎಂದು ಹೇಳಲು ನಾನು ಯಾರು? ಎಷ್ಟು ಜನ ಬೇರೆ ಜನಾಂಗದದವರು ಮಾಂಸಾಹಾರಿ ತಿನ್ನಲ್ಲವೇ? ಕೆಲವು ಜನ ಒಪ್ಪದೆ ಇರಬಹುದು. ನಾನು ಒಪ್ಪದೆ ಇರಬಹುದು, ನೀವು ಒಪ್ಪದೆ ಇರಬಹುದು. ಆದರೆ ಸಂವಿಧಾನಿಕವಾಗಿ ರಾಷ್ಟ್ರದಲ್ಲಿ ಏನು ನಡೆಯುತ್ತಿದೆ ಅದೇ ಮಾಡುತ್ತಿರುವುದಲ್ಲವೆ? ಇದು ಹೇಗೆ ಅಸಾಂವಿಧಾನಿಕ ಎಂದರು.
ಇದನ್ನೂ ಓದಿ:ದೊಡ್ಡರಸಿನಕೆರೆಯಲ್ಲಿ ಅಂಬರೀಶ್ ಪುಣ್ಯಸ್ಮರಣೆ
ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್ ನಿಂದ ತರಿಸಿ ತಿನ್ನುತ್ತಾರೆ. ಇವರೇನು ಟೂರಿಸಂ ಪ್ಯಾಕೇಜ್ ಮಾಡಿದ್ದಾರಾ. ಈ ರೀತಿ ನಡೆಯಲು ಅವಕಾಶ ಮಾಡಿಕೊಡಬೇಡಿ ನಾನು ನಮ್ಮ ಜನರಿಗೂ ಹೇಳಿದ್ದೇನೆ. ಇವರು ದಲಿತರ ಮನೆಗೆ ಹೋಗಿ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವುದು, ದಲಿತರ ಮನೆಗೆ ಹೋದರೂ ವೇಜ್ ಊಟಾನೇ ತರಿಸಿ ತಿನ್ನುವುದು. ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ