ಹಲ್ಲೆ ಖಂಡಿಸಿ ಆನಂದ ಸಿಂಗ್ ಬೆಂಬಲಿಗರ ಪ್ರತಿಭಟನೆ
Team Udayavani, Jan 21, 2019, 1:09 AM IST
ಹೊಸಪೇಟೆ: ಶಾಸಕ ಆನಂದ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ, ಹೊಸಪೇಟೆ ಹಾಗೂ ಕಮಲಾಪುರದಲ್ಲಿ ಆನಂದ ಸಿಂಗ್ ಅಭಿಮಾನಿಗಳು ಹಾಗೂ ಬೆಂಬಲಿಗರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.ನಗರದ ರೋಟರಿ ವೃತ್ತದಲ್ಲಿ ಜಮಾಯಿಸಿದ ಬೆಂಬಲಿಗರು ಮಾನವ ಸರ ಪಳಿ ನಿರ್ಮಿಸಿ, ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು.
ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಘಟನೆಗೆ ಕಾರಣರಾದ ಶಾಸಕ ಜೆ.ಎನ್.ಗಣೇಶ್ ಹಾಗೂ ಭೀಮ ನಾಯ್ಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಆಪರೇಶನ್ ಕಮಲದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿ ಯಬೇಕು ಎಂಬ ಹುನ್ನಾರ ನಡೆಸಿದ್ದನ್ನು ವಿಫಲಗೊಳಿ ಸಲು ಶಾಸಕ ಆನಂದ ಸಿಂಗ್ ಪ್ರಯತ್ನಿಸಿದ್ದಾರೆ.ಇದಕ್ಕಾಗಿಯೇ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇದೇ ವೇಳೆ, ತಾಲೂಕಿನ ಕಮಲಾಪುರದಲ್ಲಿ ಹೊಸಪೇಟೆ-ಗಂಗಾವತಿ ರಾಷ್ಟ್ರೀಯ ಹೆದ್ದಾ ರಿತಡೆ
ದು ಪ್ರತಿಭಟನೆ ನಡೆಸಲಾಯಿತು.