ಪಿಎಸ್ಐ ಅಕ್ರಮ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಿ: ಸಿದ್ದರಾಮಯ್ಯ
'ಸಿದ್ದರಾಮೋತ್ಸವ' ಎಂದು ಹೆಸರು ಕೊಟ್ಟಿದ್ದು ಮಾಧ್ಯಮದವರು
Team Udayavani, Jul 14, 2022, 2:21 PM IST
ಕಲಬುರಗಿ: ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾಗಿರುವ ಹಿರಿಯ ಅಧಿಕಾರಿ ಅಮೃತಪೌಲ್ ಮತ್ತು ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಇದರಿಂದ ನಿಜವಾದ ಕಿಂಗ್ ಪಿನ್ ಯಾರೂ, ಅವರ ಪಾತ್ರವೇನು? ಮಂತ್ರಿಮಂಡಲದವರು ಯಾರು ಶಾಮೀಲಾಗಿದ್ದಾರೆ ಎಲ್ಲವೂ ಬಯಲಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ ಮಾತ್ರಕ್ಕೆ ಸರಕಾರದ ಕೆಲಸ ಮುಗಿಯುವುದಿಲ್ಲ.ಹಗರಣದ ಪ್ರಮುಖ ಪಾತ್ರಧಾರಿ ಸಿದ್ದರಾಮಯ್ಯ ಎಂದು ಅಶ್ವತ್ಥ ನಾರಾಯಣ ದೂರಿದ್ದಾರೆ ಎಂದು ಕೇಳಿದಾಗ, ಸಿಟ್ಟಿಗೆದ್ದ ಅವರು, ” ಅಲ್ಲಾರಿ..ನಾನು ಸಿಎಂ ಇದ್ದಾಗ, ಇವರು ವಿರೋಧ ಪಕ್ಷದಲ್ಲಿ ಇದ್ರಲ್ವಾ? ಅವರಿಗೆ ಆವಾಗ ಮಾತನಾಡಲು ಯಾರ್ರೀ ..ಬೇಡ ಅಂದಿದ್ರು..ಆವಾಗ ಆಯಪ್ಪ(ಅಶ್ವತ್ಥ ನಾರಾಯಣ) ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ… ಕಡುಬು ತಿನ್ನುತ್ತಿದ್ದರೇನ್ರಿ..” ಎಂದು ಪ್ರಶ್ನಿಸಿದರು.
ತಾವು ಮಾಡಿದ ಭ್ರಷ್ಟಾಚಾರನಾ ಮುಚ್ಚಿ ಹಾಕಿಕೊಳ್ಳಲಿಕ್ಕೆ ಇನ್ನೊಬ್ಬರ ಮೇಲೆ ಆರೋಪ ಮಾಡಿ ಸುಮ್ಮನಾದ್ರೆ ನಡೆಯೋದಿಲ್ಲ. ನಾಡಿನ ಜನ ನೋಡುತ್ತಿದ್ದಾರೆ. ಬಂಧಿತರ ಮಂಪರು ಪರೀಕ್ಷೆಯಾಗಬೇಕು. ಹಗರಣದಲ್ಲಿ ಯಾರು, ಯಾರೂ ಇದ್ದಾರೆ ಎಲ್ಲರ ಬಂಧನವಾಗಬೇಕು. ಈ ಬಂಧನವಾದವರೆಲ್ಲಾ ತುಂಬಾ ಚಿಕ್ಕವರು. ಇವರೆಲ್ಲದ ಹಿಂದಿನ ಮುಖಗಳು ಬಯಲಾಗಬೇಕು. ಆಗ ಇದು ಅಂತ್ಯಕ್ಕೆ ತಲುಪುತ್ತದೆ ಎಂದರು.
ಹುಟ್ಟಬ್ಬ ಯಾರಿಗೂ ನಡುಕ ಇಲ್ಲ
ನನ್ನ ಹುಟ್ಟಿದ ಹಬ್ಬಕ್ಕೆ ನಮ್ಮ ಪಕ್ಷದಲ್ಲಿ ಯಾಕ್ರಿ.. ನಡುಕ ಹುಟ್ಟುತ್ತೆ. ಅಂತಹದ್ದೇನೂ ಇಲ್ಲ. ನಮ್ಮವರಲ್ಲಿ ಯಾಕೆ ನಡುಕ ಬರ್ತದೆ. ಅದೇನಾದರೂ ಬರಬೇಕಿದ್ದರೆ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿ. ಇದು ಸಿದ್ದರಾಮೋತ್ಸವ ಅಲ್ಲ. ಹಂಗಂತ ಹೆಸರು ಕೊಟ್ಟಿದ್ದು ಮಾಧ್ಯಮದವರು. ನಮ್ಮ ಪಕ್ಷದಲ್ಲಿ ಅಂತಹ ಹೆಸರು ಕೊಟ್ಟಿಲ್ಲ. 75 ವರ್ಷ ಆಗಿರೋದಿಕ್ಕೆ ನನ್ನ ಬೆಂಬಲಿಗರು ಉತ್ಸವ ಮಾಡುತ್ತಿದ್ದಾರೆ. ಅದಿಕ್ಕೆ ಬಿಜೆಪಿಯವರೆಗೆ ಭಯ ಶುರುವಾಗಿದೆ. ನಮ್ಮಲ್ಲೇನು ನಡುಕ ಇಲ್ಲ ಎಂದರು.
ಹಿಂದೆ ಯಡಿಯೂರಪ್ಪ ಮಾಡಿಕೊಂಡಿರಲಿಲ್ಲವಾ? ನಾನು ಹೋಗಿ ವಿಷ್ ಮಾಡಿ ಬರಲಿಲ್ಲವೇ? ಇದರಲ್ಲಿ ತುಂಬಾ ಸೂಕ್ಷ್ಮವಾಗಿ ಹುಡುಕುವಂತಹದ್ದೇನೂ ಇಲ್ಲ ಎಂದರು.
ಮಳೆ ಸರಕಾರ ಈಗಲಾದರೂ ಎಚ್ಚತ್ತುಕೊಳ್ಳಲಿ
ರಾಜ್ಯದಲ್ಲಿ ಮಳೆಯಿಂದ ಉಂಟಾಗುವ ಹಾನಿ ಮತ್ತು ಜನ ಸಂಕಷ್ಟದ ಕುರಿತು ಸರಕಾರ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ರೈತರು, ಜನರು ಸಂಕಷ್ಟಕ್ಕೆ ಸಿಲುಕಿದ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಈಗಲೂ ಏನು ಮಿಂಚಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ಇದ್ದು ಜನರ ನೋವುಗಳಿಗೆ ಸ್ಪಂದಿಸಲು ಸೂಚಿಸಬೇಕು. 2019ರ ಪರಿಹಾರ ಇನ್ನೂ ಜನರಿಗೆ ಸಿಕ್ಕಿಲ್ಲ. ಈಗ ಪುನಃ ನೆರೆಗೆ ಜನರ ಬದುಕು ಸಿಲುಕುತ್ತಿದೆ. ಕೂಡಲೇ ಸರಕಾರ ಜನರ ನೆರವಿಗೆ ಬರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ