ಸದ್ದಿಲ್ಲದೆ ಸಾಗಿದೆ ಅಗ್ರಾಣಿ ನದಿ ಪುನರುಜ್ಜೀವನ


Team Udayavani, Sep 4, 2017, 10:17 AM IST

04-STATE-2.jpg

ಹುಬ್ಬಳ್ಳಿ: ನದಿಗಳ ಸಂರಕ್ಷಣೆ, ಪುನರುಜ್ಜೀವನ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಅಭಿಯಾನಗಳೂ ನಡೆಯುತ್ತಿವೆ. ಹಾಗೆಯೇ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ನದಿಯ ಉಪನದಿಯಾದ ಅಗ್ರಾಣಿ(ಅಗ್ರಣಿ)ನದಿ ಪುನರುಜ್ಜೀವನ ಕಾರ್ಯ ಕಳೆದ ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೆ ಸಾಗಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸುಮಾರು 137 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಇನ್ನಿತರ ಕಾರ್ಯಗಳಿಗೆ ಈ ನದಿ ಆಸರೆಯಾಗಿದೆ. ಉಭಯ ರಾಜ್ಯ ಸರಕಾರಗಳು “ಜಲ ಬಿರಾದಾರಿ’ ಸರಕಾರೇತರ ಸಂಸ್ಥೆ ಹಾಗೂ ನದಿ ಪಾತ್ರದ ಗ್ರಾಮಸ್ಥರ ಸಹಕಾರದಿಂದ ನದಿ
ಪುನರುಜ್ಜೀವನ ಕಾರ್ಯ ಕೈಗೊಂಡಿದ್ದು, ಅನೇಕ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. 

105ಕಿ.ಮೀ. ಉದ್ದದ ನದಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೇs… ಖಾನಾಪುರದ ಐನವಾಡಿ-ಬಲವಡಿಯಲ್ಲಿ ಅರಳಿ ಮರವೊಂದರ ಬಳಿ ಅಗ್ರಾಣಿ ನದಿ ಉಗಮವಾಗುತ್ತದೆ. ಮಹಾರಾಷ್ಟ್ರದವರ ಪ್ರಕಾರ ಅಗ್ರಾಣಿ ನದಿ ಮಹಾರಾಷ್ಟ್ರದಲ್ಲಿ 60 ಕಿ.ಮೀ. ಹಾಗೂ ಕರ್ನಾಟಕದಲ್ಲಿ ಸುಮಾರು 45 ಕಿ.ಮೀ.
ವ್ಯಾಪ್ತಿಯಲ್ಲಿ ಹರಿಯುತ್ತದೆ. ಈ ನದಿ ಸಾಂಗ್ಲಿ ಜಿಲ್ಲೆಯ ಐದು ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು, ಅಥಣಿ ತಾಲೂಕಿನ ಖೇಳೆಗಾಂವಿ ಎಂಬಲ್ಲಿ ಕೃಷ್ಣ ನದಿಯನ್ನು ಸೇರುತ್ತದೆ. ಮಹಾರಾಷ್ಟ್ರದ 107 ಗ್ರಾಮಗಳ ಸುಮಾರು 1,38,800 ಹೆಕ್ಟೇರ್‌ ಭೂಮಿಗೆ ನೀರು
ಒದಗಿಸುತ್ತಿದ್ದು, ಅಂದಾಜು 3.25 ಲಕ್ಷ ಜನರಿಗೆ ನೀರಿನ ಆಸರೆಯಾಗಿದೆ.

ಪುನರುಜ್ಜೀವನ ಯಜ್ಞ: ಮಹಾರಾಷ್ಟ್ರದಲ್ಲಿ ಅಗ್ರಾಣಿ ನದಿ ಪುನರುಜ್ಜೀವನ ಯತ್ನ 2013ರಿಂದ ನಡೆಯುತ್ತಿದೆ. ಜಲತಜ್ಞ ಡಾ|ರಾಜೇಂದ್ರ ಸಿಂಗ್‌ ಅವರ “ಜಲ ಬಿರಾದರಿ’ ಸಂಘಟನೆ ಈ ಕಾರ್ಯಕ್ಕೆ ಮುಂದಾದಾಗ ಸಾಂಗ್ಲಿ ಜಿಲ್ಲಾಡಳಿತ ಅಗತ್ಯ ಪ್ರೋತ್ಸಾಹ ನೀಡಿತ್ತು. ಅಗ್ರಾಣಿ ನದಿ ಪುನರುಜ್ಜೀವನ ಕುರಿತು ದೇಶದಲ್ಲಿ ಐಎಎಸ್‌ ಅಧಿಕಾರಿಗಳಾಗಿ ನೇಮಕಗೊಳ್ಳುವವರಿಗೆ ತರಬೇತಿ ನೀಡುವ ಮಸೂರಿನ ಲಾಲ್‌ ಬಹದ್ದೂರ ಶಾಸ್ತ್ರಿ ಅಕಾಡೆಮಿಯಿಂದ ಅಧ್ಯಯನಕ್ಕೆ “ಜಲ ಬಿರಾದಾರಿ’ ಆಹ್ವಾನಿಸಿತ್ತು. ಐಎಎಸ್‌ ತರಬೇತಿ ಪಡೆದ ಅನೇಕರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸುಮಾರು 107 ಗ್ರಾಮಗಳಲ್ಲಿ “ಜಲ ಬಿರಾದಾರಿ’ಯ ನರೇಂದ್ರ ಚುಘ ನೇತೃತ್ವದಲ್ಲಿ 2013ರ ಸೆಪ್ಟೆಂಬರ್‌ನಲ್ಲಿ ಜಾಗೃತಿ ಅಭಿಯಾನ
ಹಾಗೂ ಚೆಕ್‌ ಡ್ಯಾಂ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. 

ಕರ್ನಾಟಕದಲ್ಲಿಯೂ ಅಗ್ರಾಣಿ ನದಿ ಪುನರುಜ್ಜೀವನ ಜಾಗೃತಿ 2016ರಿಂದ ನಡೆಯುತ್ತಿದೆ. ಅಥಣಿ ತಾಲೂಕಿನ ಅಣ್ಣಾ ಸಾಹೇಬ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ| ರಾಜೇಂದ್ರ ಪೊದ್ದಾರ ಇನ್ನಿತರರ ಮಾರ್ಗದರ್ಶನದಲ್ಲಿ ನದಿ ತಟದ 22 ಹಾಗೂ ನದಿಗೆ ಹೊಂದಿಕೊಂಡು ಕೃಷಿ ಭೂಮಿ
ಇರುವ 10 ಗ್ರಾಮಗಳಲ್ಲಿ ಜನ ಜಾಗೃತಿ ನಡೆದಿದೆ.

ಬೆಳಗಾವಿ ಜಿಲ್ಲಾಡಳಿತ, ಜಿಪಂ ಸಹಕಾರ ನೀಡಿವೆ. ಬೆಳಗಾವಿ ಜಿಪಂ ಸಿಇಒ ಡಾ|ರಾಮಚಂದ್ರನ್‌ ನದಿ ಪುನರುಜ್ಜೀವನಕ್ಕೆ ಉತ್ಸುಕತೆ ತೋರಿದ್ದರಿಂದ ಸಣ್ಣ ನೀರಾವರಿ ಇಲಾಖೆ 20 ಬ್ಯಾರೇಜ್‌, ಬೃಹತ್‌ -ಮಧ್ಯಮ ಜಲಸಂಪನ್ಮೂಲ ಇಲಾಖೆ ಹಾಗೂ ಬೆಳಗಾವಿ ಜಿಪಂನಿಂದ ತಲಾ ಎರಡು ಬ್ಯಾರೇಜ್‌
ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಅಗ್ರಾಣಿ ನದಿ ಪುನರುಜ್ಜೀವನ ಕಾರ್ಯಪಡೆ ರಚಿಸಲಾಗಿದೆ.

ಅಗ್ರಾಣಿ ನದಿ ಬಗ್ಗೆ ಸುಮಾರು 32 ಗ್ರಾಮಗಳಲ್ಲಿ ಜಾಗೃತಿ ಕೈಗೊಳ್ಳಲಾಗಿದೆ. ನದಿಯಲ್ಲಿನ ಬಳ್ಳಾರಿ ಜಾಲಿ (ಪೀಕಜಾಲಿ) ಬೆಳೆದಿದ್ದು, ಅದನ್ನು ತೆಗೆದ ನಂತರ ನದಿಯ ಎರಡೂ ಬದಿ ಸೀತಾಫ‌ಲ ಹಾಗೂ ಪೇರಲ ಗಿಡಗಳನ್ನು ನಾಟಿ ಮಾಡಲಾಗುವುದು. 
ಅಣ್ಣಾ ಸಾಹೇಬ, ಅಗ್ರಾಣಿ ನದಿ ಪುನರುಜ್ಜೀವನ ಕಾರ್ಯಪಡೆ ಸದಸ್ಯ

ಅಗ್ರಣಿ ನದಿಯ ದಡದಲ್ಲಿ ಅರಣ್ಯ ಬೆಳೆಸುವ ಕಾರ್ಯ ಸಾಗಿದ್ದು, ಮುಂದಿನ 4-5 ವರ್ಷಗಳಲ್ಲಿ ಇದು ಮಹತ್ವದ ಫ‌ಲ ನೀಡಲಿದೆ. ಕರ್ನಾಟಕದಲ್ಲಿಯೂ ಅಗ್ರಾಣಿ ಪುನರುಜ್ಜೀವನ ಜಾಗೃತಿ ಕಾರ್ಯ ನಡೆದಿರುವುದು ಸ್ವಾಗತಾರ್ಹ.
ನರೇಂದ್ರ ಚುಘ, ಜಲ ಬಿರಾದಾರಿ ಸಂಘಟನೆ ಮುಖಂಡ

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.