ರಾಹುಲ್ ಬ್ರಾಹ್ಮಣ ಎಂದು ಜನಿವಾರ ತೋರಿಸೋ ಸ್ಥಿತಿ ಬಂದಿದೆ
Team Udayavani, Feb 23, 2019, 1:26 AM IST
ಹುಬ್ಬಳ್ಳಿ: ಹಿಂದೂಗಳನ್ನು ಸದಾ ಕಡೆಗಣಿಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ತಾನು ಹಿಂದೂ ಬ್ರಾಹ್ಮಣ ಎಂದು ಹೇಳಿಕೊಂಡು ಎಲ್ಲ ಜನರಿಗೆ ಜನಿವಾರ ತೋರಿಸುವ ಸ್ಥಿತಿ ಬಂದಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಬಗ್ಗೆ ನಂಬಿಕೆ, ಶ್ರದ್ಧೆ ಇಲ್ಲದೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ರಾಹುಲ್, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಶಿರಡಿ, ತಿರುಪತಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ನದ್ದು ನಕಲಿ ಮಾಡುವ ಸಂಸ್ಕೃತಿ. ಗಾಂಧಿ ಕುಟುಂಬದವರು ಯಾರೂ ಕೂಡ ಸರಿಯಾಗಿ ಶಾಲೆ ಕಲಿತಿಲ್ಲ. ಅವರದು ನಕಲಿ ಕುಟುಂಬ. ಬಿಜೆಪಿ ಮಿಸ್ಡ್ ಕಾಲ್ ನೀಡಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದಾಗ ಇದನ್ನು ಟೀಕಿಸಿದ್ದ ಕಾಂಗ್ರೆಸ್ ಈಗ ತಾನೂ ಕೂಡ ಮಿಸ್ಡ್ ಕಾಲ್ ನೀಡಿ ಸದಸ್ಯತ್ವ ಮಾಡಿ ಕೊಳ್ಳುವ ಅಭಿಯಾನ ಆರಂಭಿಸಿದೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…