ಕೈಮಗ್ಗ ನೇಕಾರಿಕೆಗೆ ಮನಸೋತ ಅಧಿಕಾರಿ : ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಮೌರ್ಯ ಭೇಟಿ
Team Udayavani, Jan 23, 2022, 3:08 PM IST
ಮಹಾಲಿಂಗಪುರ : ನೇಕಾರ ಕರಕುಶಲತೆ ಮತ್ತು ಕೈಮಗ್ಗ ಬಟ್ಟೆಗಳಿಗೆ ಮನಸೋತ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ಅವರು ಶನಿವಾರ ಪಟ್ಟಣದ ಹಿರಿಯ ಕೈಮಗ್ಗ ನೇಕಾರರಾದ ಶಿವಶಂಕರ ಮೂಡಲಗಿ, ಮಲ್ಲಪ್ಪ ನಡಕಟ್ನಿ ಅವರ ಮನೆಗಳಿಗೆ ಭೇಟಿ ನೀಡಿದರು.
ಕೈಮಗ್ಗ ನೇಕಾರಿಕೆಯ ನೂಲು(ಖಂಡಕಿ) ಸುತ್ತುವುದು, ಸಂದರಕಿ ಹಾಕುವುದು, ಹಾಸು ಹೊಯ್ಯುವುದು, ವಾಡರ್ ಹಾಕುವುದು, ಟಾವೆಲ್ ನೇಯ್ಗೆ ಮಾಡುವುದನ್ನು ವೀಕ್ಷಿಸಿ ಮಾಹಿತಿ ಪಡೆದರು. ಸ್ವತಃ ತಾವೇ ಖಂಡಕಿ ಸುತ್ತಿ ಖುಷಿಪಟ್ಟರು. ಮಹಾಲಿಂಗಪ್ಪ ಸೋರಗಾಂವಿ ಅವರ ಮನೆಗೆ ಭೇಟಿ ನೀಡಿ, ಕುಣಿ ಕೈಮಗ್ಗ ವೀಕ್ಷಿಸಿ ಮಾಹಿತಿ ಪಡೆದರು.
ಸುಮಾರು 40ಕ್ಕೂ ಅಧಿಕ ಕೈಮಗ್ಗ ನೇಕಾರರಿಗೆ ಉದ್ಯೋಗ ನೀಡಿ, ಕೈಮಗ್ಗ ಉಳಿವಿಗೆ ಶ್ರಮಿಸುತ್ತಿರುವ ಪಟ್ಟಣದ ಶಿವಶಂಕರ ಮೂಡಲಗಿ ಹಾಗೂ ತಮ್ಮ 75ನೇ ವಯಸ್ಸಿನಲ್ಲಿಯೂ
ನೇಕಾರಿಕೆಯಲ್ಲಿ ತೊಡಗಿರುವ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿದರು.
ನೇಕಾರರನ್ನು ಸನ್ಮಾನಿಸಿ ಮಾತನಾಡಿದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ನೇಕಾರಿಕೆ ಅದೊಂದು ಅದ್ಭುತ ಕಲೆಯಾಗಿದೆ. ನೂಲಿನ ಎಳೆ ಎಳೆಗಳನ್ನು ಜೋಡಿಸಿ ಬಟ್ಟೆಗಳನ್ನು ತಯಾರಿಸುವ ಕೈಮಗ್ಗ ನೇಕಾರರ ಸಂಯಮ, ಶ್ರದ್ಧೆ, ಕಾಯಕ ನಿಷ್ಠೆ ಅಗಾಧವಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ದಾನೇಶ್ವರಿ ಕೈಮಗ್ಗ ಬಟ್ಟೆ ಉತ್ಪಾದನಾ ಘಟಕದ ಮಾಲೀಕ ಶಿವಶಂಕರ ಮೂಡಲಗಿ, ಕೈಮಗ್ಗ ನೇಕಾರಿಕೆ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ
ರಾಜೇಶಕುಮಾರ ಮೌರ್ಯ ಅವರ ಸರಳತೆ, ಪ್ರೊತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ಮ. ನಡಕಟ್ನಿ ಮಾತನಾಡಿ, ನಮ್ಮನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು ಸನ್ಮಾನಿಸಿ-ಅಲ್ಲಿಯೇ ಒಂದು ವಾರದವರೆಗೆ ಕೈಮಗ್ಗ ಸ್ಥಾಪಿಸಿ, ನೇಕಾರಿಕೆ ಹಾಗೂ ಕೈಮಗ್ಗ ಬಟ್ಟೆಗಳನ್ನು ಪರಿಚಯಿಸಿದ್ದರು. ಈಗ ನಮ್ಮ ಮನೆಗೆ ಬಂದು ಸನ್ಮಾನಿಸಿ, ಪ್ರೊತ್ಸಾಹಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಮಹಾಲಿಂಗೇಶ್ವರ ಮಠಕ್ಕೆ ಭೇಟಿ: ನೇಕಾರರ ಮನೆಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಮಹಾಲಿಂಗೇಶ್ವರ
ಮಠದ ಪೀಠಾಧಿ ಪತಿ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿ-ಗೌರವಿಸಿದರು. ಗೋವಿಂದ ಕೆಳಕರ, ಸಂಜು ಹಳ್ಳಿ, ಮಹಾಂತೇಶ ಮೂಡಲಗಿ, ಸೋಮಶೇಖರ ಮೂಡಲಗಿ, ಈಶ್ವರ ಮಠದ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!