ಬಿಜೆಪಿಯ ಮಂಗಳೂರು ಚಲೋ v/s ಸಾಮರಸ್ಯ ನಡಿಗೆ: ರೈ ತಿರುಗುಬಾಣ
Team Udayavani, Sep 4, 2017, 3:59 PM IST
ಬೆಂಗಳೂರು: ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹಾಗೂ ವಿನಾಯಕ ಬಾಳಿಗಾ ಪ್ರಕರಣ ಎಲ್ಲವೂ ನಿಯೋಜಿತ ಹತ್ಯೆಗಳೆ. ಎಲ್ಲಾ ಕೊಲೆಗಳನ್ನು ಪೊಲೀರು ಟ್ರೇಸ್ಔಟ್ ಮಾಡಿದ್ದಾರೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇಂತಹ ವೇಳೆ ಬಿಜೆಪಿ ಬೈಕ್ ಜಾಥಾ ಹಮ್ಮಿಕೊಂಡಿದೆ. ಇದು ಜಿಲ್ಲೆಯಲ್ಲಿ ಸಾಮರಸ್ಯ ಕೆಡಿಸುವ ಪ್ರಯತ್ನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಸೋಮವಾರ ಹೇಳಿದರು.
ಕೆಲವು ಮತೀವಾದಿ ಶಕ್ತಿಗಳು ಸಾಮರಸ್ಯ ಕೆಡಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯುಲ್ಲಿ ಸಾಮರಸ್ಯ ಹತೋಟಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಪ್ರಖ್ಯಾತಿ. ಇಲ್ಲಿ ಎಲ್ಲರೂ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಆದರೆ ಕೋಮುಗಲಭೆಯಿಂದಾಗಿ ನಮ್ಮ ಜಿಲ್ಲೆಗೆ ಹೊರಜಗತ್ತಿನಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ ಎಂದು ರೈ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರ ಜತೆ ಮಾತನಾಡಿದ ಅವರು, ಬಿಜೆಪಿ ಮತ್ತು ಸಂಘಪರಿವಾರ ಸಾಮಾರಸ್ಯ ಕೆಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ಆರೋಪಿಸಿದರು.
ಸೆ.12ರಂದು ಸಾಮರಸ್ಯ ನಡಿಗೆ:
ಬಿಜೆಪಿಯವರ ಜಾಥಾಕ್ಕೆ ಪ್ರತಿಯಾಗಿ ಸೆಪ್ಟೆಂಬರ್ 12ರಂದು ಪರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಿರುವುದಾಗಿ ಸಚಿವ ರೈ ಹೇಳಿದರು. ಹತ್ಯೆಗಳಲ್ಲಿ ಭಾಗವಹಿಸಿದ್ದ ಸಂಘಟನೆಗಳು ಹೊರತುಪಡಿಸಿ, ಚಿಂತಕರು, ಬುದ್ಧಿಜೀವಿಗಳು ಹಾಗೂ ಬೇರೆ ಎಲ್ಲಾ ಸಂಘಟನೆಗಳಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.