ರಮೇಶ, ಅಂಬಿರಾವ್ ಸೇರಿ ಗೋಕಾಕ ಲೂಟಿ: ಸತೀಶ
Team Udayavani, Sep 24, 2019, 3:03 AM IST
ಬೆಳಗಾವಿ: ನನ್ನ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುವ ಬದಲು ನನ್ನ ಹಗರಣಗಳ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಶಾಸಕ ಸತೀಶ ಜಾರಕಿಹೊಳಿ ತಮ್ಮ ಸಹೋದರ ರಮೇಶಗೆ ನೇರ ಸವಾಲು ಹಾಕಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ಮನೆತನಕ್ಕಿಂತ ಪಕ್ಷ ಮುಖ್ಯವಾಗಿದೆ. ರಮೇಶ ಜಾರಕಿಹೊಳಿ ಹಾಗೂ ಅವರ ಅಳಿಯ ಸೇರಿಕೊಂಡು ಗೋಕಾಕ ಲೂಟಿ ಮಾಡಿದ್ದಾರೆ.
ಇದಕ್ಕಿಂತ ದೊಡ್ಡ ಹಗರಣ ಬೇರೆ ಯಾವುದೂ ಇಲ್ಲ. ಏನೂ ಗೊತ್ತಿಲ್ಲದವರಂತೆ ನಟಿಸುವ ರಮೇಶ ಜಾರಕಿಹೊಳಿ ತಾವು ಯಾವ ವಸ್ತು ಕಳೆದುಕೊಂಡಿದ್ದೇನೆಂದು ಹೇಳಿದರೆ ಒಳ್ಳೆಯದು. ಇದರಿಂದ ನನ್ನ ಬಾಯಿ ಕೆಡಿಸಿಕೊಳ್ಳುವದು ತಪ್ಪುತ್ತದೆ. ಗೋಕಾಕದಲ್ಲಿ ನಾನು ಮಾಡುವ ಸಮಾವೇಶದಲ್ಲಿ ಬರೀ ವಸ್ತುವಿನ ಬಗ್ಗೆ ಹೇಳುವುದಲ್ಲ. ಬೇರೆ ಅಭಿವೃದ್ಧಿ ವಿಷಯಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ.
ಕಳೆದ 20 ವರ್ಷಗಳಲ್ಲಿ ಗೋಕಾಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತೇನೆ ಎಂದರು. ರಮೇಶ ಅವರ ಅಳಿಯ ಅಂಬಿರಾವ್ ಈಗ ನಿಯಂತ್ರಣಕ್ಕೆ ಸಿಗದ ವ್ಯಕ್ತಿಯಾಗಿದ್ದಾರೆ. ಅಂಬಿರಾವ್ ಈಗ ಅದಾನಿ ಮತ್ತು ಅಂಬಾನಿಯಾಗಿದ್ದಾರೆ. ರಮೇಶ ಒಂದು ರೀತಿ ಹಿಟ್ ಆ್ಯಂಡ್ ರನ್ ರಾಜಕಾರಣಿ. ಒಂದೊಂದು ಹೇಳಿಕೆಗೂ ತಾಳಮೇಳ ಇರುವುದಿಲ್ಲ. ಚುನಾವಣೆ ಮತ್ತು ಲಾಭಕ್ಕಾಗಿ ಏನೇನೋ ಹೇಳುತ್ತಾನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…