ಜಾರಕಿಹೊಳಿ ಹೆಸರು ಬರೆದಿಟ್ಟು ನಾನು ಸಾಯ್ಬೇಕು ಅನಿಸ್ತಿದೆ: ಸಿಡಿ ಲೇಡಿಯ ಮತ್ತೊಂದು ವಿಡಿಯೋ
Team Udayavani, Mar 27, 2021, 7:45 AM IST
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಯುವತಿ “ ನನಗೆ ಬದುಕಬೇಕೋ ಸಾಯಬೇಕೊ ಗೊತ್ತಿಲ್ಲ, ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದುಬಿಟ್ಟು ನಾನು ಸಾಯಬೇಕು ಅನಿಸುತ್ತಿದೆ” ಎಂದಿದ್ದಾಳೆ.
ಯುವತಿ ಆಡಿಯೋವೊಂದು ಶುಕ್ರವಾರ ವೈರಲ್ ಆದ ಬಳಿಕ ಇಂದು ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾದ ಕಾರಣ ಅದಕ್ಕೆ ಸಮಜಾಯಿಷಿ ನೀಡುವಂತೆ ಯುವತಿ ಮಾತನಾಡಿದ್ದಾಳೆ.
ಇದನ್ನೂ ಓದಿ:ಶನಿವಾರ ಇನ್ನಷ್ಟು ಮಾಹಿತಿ ಬಹಿರಂಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
ವಿಡಿಯೋ ಲೀಕ್ ಆದಾಗ ನಾನು ಮಾಧ್ಯಮದಲ್ಲಿ ಪರಿಚಯವಾಗಿದ್ದ ನರೇಶ್ ಗೆ ಕರೆ ಮಾಡಿದ್ದೆ. ನಾನು ಈ ವಿಚಾರದಲ್ಲಿ ಸಣ್ಣವ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಬಳಿ ಮಾತನಾಡೋಣ ಎಂದು ಹೇಳಿದ್ದರು ಎಂದು ಯುವತಿ ಹೇಳಿದ್ದಾಳೆ. ಅದಲ್ಲದೆ ನಾನು ಮತ್ತು ನರೇಶ್ ಅವರು ಡಿ ಕೆ ಶಿವಕುಮಾರ್ ಭೇಟಿಗೆ ಹೋದೆವು. ಆದರೆ ಅವರು ಸಿಗಲಿಲ್ಲ ಎಂದಿದ್ದಾಳೆ.
ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಆದರೆ ನನ್ನ ಅಪ್ಪ ಅಮ್ಮನಿಗೆ ಭದ್ರತೆಯಿಲ್ಲ. ಅಪ್ಪಅಮ್ಮ, ಅಜ್ಜಿ, ಇಬ್ಬರು ತಮ್ಮಂದಿರನ್ನು ಎಸ್ ಐಟಿಯವರು ಬೆಂಗಳೂರಿಗೆ ತಂದಿರಿಸಬೇಕು. ಅವರ ಕಣ್ಮುಂದೆಯೇ ನಾನು ಹೇಳಿಕೆ ನೀಡುತ್ತೇನೆ ಎಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ: ಸಿಡಿ ಲೇಡಿಯ ಮೂರನೇ ವಿಡಿಯೋ ಬಿಡುಗಡೆ: ವಕೀಲರ ಮೂಲಕ ದೂರು ನೀಡಲು ನಿರ್ಧಾರ
ಒಂದೇ ದಿನದಲ್ಲಿ ನಾನು ಸರ್ಕಾರ ಬೀಳಿಸಬಲ್ಲೆ, ಎಷ್ಟು ದುಡ್ಡು ಬೇಕಾದರೂ ಖರ್ಚಾಗಲಿ ಎಂದು ಜಾರಕಿಹೊಳಿ ಹೇಳಿದ್ದಾರೆ. ಇದರ ಅರ್ಥವೇನು? ನನಗೆ ತುಂಬಾ ಹಿಂಸೆಯಾಗುತ್ತಿದೆ. ನನಗೆ ಬದುಕಬೇಕೋ ಸಾಯಬೇಕೊ ಗೊತ್ತಿಲ್ಲ, ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದುಬಿಟ್ಟು ನಾನು ಸಾಯಬೇಕು ಅನಿಸುತ್ತಿದೆ ಎಂದು ಯುವತಿ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ