ಕಿಡ್ನಿ ಕೊಟ್ಟು ಮೊಮ್ಮಗನಿಗೆ ಬಾಳು ಕೊಟ್ಟ ಅಜ್ಜ
Team Udayavani, Feb 23, 2019, 12:39 AM IST
ಹುಬ್ಬಳ್ಳಿ: ಎಂಟು ವರ್ಷದ ಬಾಲಕನಿಗೆ 52 ವಯಸ್ಸಿನ ವ್ಯಕ್ತಿಯ ಮೂತ್ರಪಿಂಡ (ಕಿಡ್ನಿ) ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಪೂರೈಸಿದೆ.
ಸುದ್ದಿಗೋಷ್ಠಿಯಲ್ಲಿ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ ಮೊಗೇರ ಮಾತನಾಡಿ, ಎಂಟು ವರ್ಷದ ಮಲ್ಲು ಕೋಟಿಕಲ್ಲ ಎಂಬ ಬಾಲಕನಿಗೆ ಆತನ ಅಜ್ಜನ ಮೂತ್ರಪಿಂಡ ದಾನ ಪಡೆದು ಜೋಡಿಸಲಾಗಿದೆ. ಇಂತಹ ಶಸ್ತ್ರಚಿಕಿತ್ಸೆ ಉತ್ತರ ಕರ್ನಾಟಕದಲ್ಲಿ ಮೊದಲು. ಕಳೆದ ಐದು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ ನಮ್ಮ ಆಸ್ಪತ್ರೆಗೆ ಬಂದಾಗ ಮೂತ್ರಪಿಂಡ ಜೋಡಣೆ ಅನಿರ್ವಾಯವಾಗಿತ್ತು. ಬಾಲಕನ ಅಜ್ಜನ ಕಿಡ್ನಿ ಪಡೆದು ಬಾಲಕನಿಗೆ ಜೋಡಿಸಲಾಗಿದೆ ಎಂದರು.
ಬಾಲಕನ ತಾಯಿ ಚಿನ್ನಮ್ಮ ಕೋಟಿಕಲ್ಲ ಮಾತನಾಡಿ, ಮಗನಿಗೆ ಕಿಡ್ನಿ ನೀಡಲು ನಾನು ಮತ್ತು ನನ್ನ ಪತಿ ಸಿದ್ಧ ರಿದ್ದೆವು. ಆದರೆ ನಮ್ಮ ಕಿಡ್ನಿ ಅವನಿಗೆ ಹೊಂದಾಣಿಕೆ ಆಗಲಿಲ್ಲ. ನಮ್ಮ ತಂದೆಯವರ ಕಿಡ್ನಿ ಹೋಲಿಕೆಯಾಗಿದ್ದು, ಮೊಮ್ಮಗನಿಗೆ ಕಿಡ್ನಿ ದಾನ ಮಾಡಿ ನನ್ನ ಮಗನ ಪ್ರಾಣ ಉಳಿಸಿದ್ದಾರೆ. ಸೈನಿಕನ ಮಗ ಎನ್ನುವ ಕಾರಣಕ್ಕೆ ಆಸ್ಪತ್ರೆಯಿಂದ ಶೇ.50ರಿಯಾಯಿತಿ ನೀಡಿರುವುದು ಒಂದಿಷ್ಟು ಆರ್ಥಿಕ ತೊಂದರೆ ತಪ್ಪಿದಂತಾಗಿದೆ ಎಂದು
ತಿಳಿಸಿದರು.
ಮಗುವಿನ ತಂದೆ ಸೋಮಪ್ಪ ಕೋಟಿಕಲ್ಲ, ಕಿಡ್ನಿ ದಾನ ಮಾಡಿದ ಹುಚ್ಚಪ್ಪ ನರಿ, ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ದಿಲೀಪ ಜವಳಿ, ಡಾ.ಮಂಜು ಪ್ರಸಾದ, ಡಾ.ಭರತ ಕ್ಷತ್ರಿ, ಡಾ.ಸಂಜೀವ ಕುಲಗೋಡ, ಡಾ.ಶ್ರೀನಿವಾಸ ಹರಪನಹಳ್ಳಿ, ಡಾ.ಬಸವರಾಜ ಕಲ್ಲಾಪುರ, ಡಾ.ವಿನೋದ ರಟ್ಟಿಗೇರಿ, ಡಾ.ಸುಧೀಂದ್ರ ಪತೇಪೂರ, ಡಾ.ಶೀತಲ ಕುಲಗೋಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ