ಹುಣಸೆ ಹಣ್ಣಿನ ಬೆಲೆ ದಿಢೀರ್‌ ಕುಸಿತ: ಕೆ.ಜಿ.ಗೆ 40 ರೂ. ಇದ್ದ ಹಣ್ಣಿಗೆ ಈಗ 15 ರೂಪಾಯಿ


Team Udayavani, Jun 2, 2022, 11:31 AM IST

5price

ದೇವನಹಳ್ಳಿ: ಹುಣಸೆಹಣ್ಣು ಹುಳಿಯಾದರೂ, ಎಷ್ಟು ಹಳೆದಾಗುತ್ತದೋ ವರ್ತಕರಿಗೆ ಸಿಹಿ ಆಗುತ್ತದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಹೆಚ್ಚು ಹುಣಸೆಹಣ್ಣು ಲಾಭದಾಯಕ ಆಗಿರುತ್ತದೆ. ಹುಣಸೆಹಣ್ಣು ದಿಢೀರನೆ ಬೆಲೆ ಇಳಿಕೆಯಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯಲ್ಲಿ ಅನೇಕ ಮರಗಳಲ್ಲಿ ಹುಣಸೆಕಾಯಿ ಬಿಡಿಸದೆ ಹಾಗೆಯೇ ಬಿಟ್ಟಿದ್ದಾರೆ. ದರ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರು ಹುಣಸೆಕಾಯನ್ನು ಸಂಗ್ರಹಿಸುತ್ತಿದ್ದಾರೆ. ಮಾರಕಟ್ಟೆಯಲ್ಲಿ ಟೊಮೊಟೋ ದರ ಗಗನಕ್ಕೇರುತ್ತಿದ್ದಂತೆ ಸಾರು ಮಾಡಲು ಹುಣಸೆಹಣ್ಣು ಇದೆ ಎಂದು ಹೆಣ್ಣುಮಕ್ಕಳು ಹೇಳುತ್ತಿದ್ದ ಮಾತು ಅದ್ಹೇಕೋ ಈ ಬಾರಿ ಹುಸಿಯಾದಂತೆ ಕಾಣಿಸುತ್ತಿದೆ. ಟೊಮೊಟೋ ಏರಿಕೆ ಇಳಿಯಂಗಿಲ್ಲ. ಹುಣಸೆಹಣ್ಣು ಏರಂಗಿಲ್ಲ ಎಂಬಂತಾಗಿದೆ ಸದ್ಯದ ಪರಿಸ್ಥಿತಿ.

ಜಿಲ್ಲೆಯ ಹುಣಸೆಹಣ್ಣಿನ ವಹಿವಾಟು ನಡೆಯುತ್ತಿದ್ದು, ದಿಢೀರ್‌ ಬೆಲೆ ಇಳಿಕೆ ಕಂಡಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಹುಣಸೆ ಹಣ್ಣು ಮಾರುಕಟ್ಟೆ ಪ್ರವೇಶಿಸುವ ಆರಂಭದಲ್ಲಿ ಬೆಲೆ ಇದ್ದು, ಬೆಳೆಗಾರರಲ್ಲಿ ಸಂತಸ ತಂದಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಬೆಲೆ ಇಲ್ಲದಂತಾಗಿದ್ದು, ರೈತರಿಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.

 ಹಾಕಿದ ಬಂಡವಾಳ ಕೈಸೇರುತ್ತಿಲ್ಲ

ತುಮ ಕೂರು ಬಿಟ್ಟರೆ ಬಯಲುಸೀಮೆ ಕೋಲಾರ, ಚಿಕ್ಕಬಳ್ಳಾಪುರ ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಹುಣಸೆಹಣ್ಣನ್ನು ರಫ್ತು ಮಾಡುತ್ತಾರೆ. ಏಕೈಕ ಹುಣಸೆಹಣ್ಣಿನ ಮಾರುಕಟ್ಟೆಗೆ ಹೆಸರಾದ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇದೆ. ಆದರೆ, ಬೆಲೆ ಕುಸಿತದಿಂದ ಹುಣಸೆ ಬೆಳೆ ಗಾರರಿಗೆ ಹಾಕಿದ ಬಂಡವಾಳವೂ ಕೈಸೇರುತ್ತಿಲ್ಲ ಎಂಬ ಅಳಲು ಬೆಳೆಗಾರರಿಂದ ಕೇಳಿ ಬರುತ್ತಿದೆ.

ಬಯಲು ಸೀಮೆ ಜಿಲ್ಲೆಗಳ ರೈತರಿಗೆ ಹುಣಸೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಳೆದ ವರ್ಷ ಉತ್ತಮ ಮಳೆ ಆಗಿ ಫ‌ಸಲು ನಿರೀಕ್ಷೆಗೂ ಮೀರಿ ಬಂದಿದೆ. ಕೊಯ್ಲು ಮಾಡಿ ಹೊಟ್ಟು ತೆಗೆದು ಕಾಯಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಹುಣಸೆ ಕಡಿಮೆ ಬೆಲೆಗೆ ಮಾರಾಟ ಹಾಕುತ್ತಿದ್ದ ಕೂಲಿ ಸಾಗಾಟದ ವೆಚ್ಚ ಕೈಗೆ ಬರುತ್ತಿಲ್ಲ ಎಂದು ಹುಣಸೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡರು.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ ಗೂ ಬರಲಿದೆ ಎಡಿಟ್‌ ಆಯ್ಕೆ

ಬೆಂಬಲ ಬೆಲೆ ನೀಡಲು ಒತ್ತಾಯ

ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾದರೆ ತಿಂಗಳಗಟ್ಟಲೇ ಕಾಯಬೇಕು. ಆದರೆ, ಬೆಲೆ ಕುಸಿತ ಕಂಡಾಗ ಸರ್ಕಾರ ರೈತರ ನೆರವಿಗೆ ಬರುವುದಿಲ್ಲ ಎಂದು ಬೆಳೆಗಾರರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಸರ್ಕಾರ ಹುಣಸೆ ಬೆಳೆಗಾರರ ನೆರವಿಗೆ ಧಾವಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಹುಣಸೆಹಣ್ಣನ್ನು ಮರದಿಂದ ಕಿತ್ತ ನಂತರ ಮೇಲ್ಭಾಗದ ತೊಗಟೆ ತೆಗೆದು ಬೀಜವನ್ನು ಹುಣಸೆಹಣ್ಣಿನಿಂದ ಬೇರ್ಪಡಿಸಬೇಕು. ವಾತಾವರಣ ತುಸು ಬಿಸಿಲಿನಿಂದ ಕೂಡಿದರೆ ಹಣ್ಣು ಪ್ರತ್ಯೇಕಿಸುವುದು ಸುಲಭ. ಆದರೆ, ಕಳೆದ ಒಂದು ತಿಂಗಳಿನಿಂದ ಎಡಬಿಡದೆ ಸುರಿದ ಮಳೆ ಕೂಡಾ ಹುಣಸೆ ಫ‌ಸಲು ಕೊಯ್ಯಲು ಅಡ್ಡಿ ಮಾಡಿತು. ತೇವಾಂಶವಿದ್ದರೆ ಹುಣಸೆಹಣ್ಣು ಕೈಗೆ ಅಂಟುತ್ತದೆ. ಹಾಗಾಗಿ, ರೈತರು ಮರದಿಂದ ಕೀಳುವುದೇ ಮರೆತರು. ಹುಣಸೆಹಣ್ಣು ಕೃಷಿಗೆ ಬರುತ್ತದೋ, ತೋಟಗಾರಿಕೆ ವ್ಯಾಪ್ತಿಗೋ ಎಂಬಿತ್ಯಾದಿ ಗೊಂದಲದಲ್ಲಿ ಇದ್ದಾರೆ ರೈತರು.

ದರ ಕುಸಿತ ಹೊರತು ಪಡಿಸಿದರೆ ಅಷ್ಟಾಗಿ ಬೇರೆ ಸಮಸ್ಯೆಗಳು ಹುಣಸೆಹಣ್ಣಿಗೆ ಬಾರದು. ಚಿಲ್ಲರೆ ಅಂಗಡಿಗಳಲ್ಲಿ ಒಂದು ಕೆ.ಜಿ. ಹುಣಸೆಹಣ್ಣಿಗೆ ಈ ಹಿಂದೆ ಅಂಗಡಿಗಳಲ್ಲಿ 180ರಿಂದ 200 ರೂ. ದರವಿದೆ. ಆದರೆ, ಇದರ ಅರ್ಧದಷ್ಟು ಹಳ್ಳಿಗಳಲ್ಲಿ ಬೆಲೆ ಕಟ್ಟುತ್ತಿಲ್ಲ. ಹಾಗಾಗಿ, ಮರದಿಂದ ಕೀಳದಿರು ವುದೇ ಒಳ್ಳೆಯದೆಂಬ ತೀರ್ಮಾನಕ್ಕೆ ರೈತರ ಬಂದಿದ್ದಾರೆ.

ಹುಣಸೆಹಣ್ಣು ದರ ಹೆಚ್ಚಾಗಿದ್ದಾಗ ರೈತರಲ್ಲಿ ಸಂತಸ ಇತ್ತು. ಇದೀಗ ಬೆಲೆ ಇಳಿಕೆಯಾಗಿರುವುದರಿಂದ ದಿಕ್ಕು ತೋಚದಂತಾಗಿದೆ. ಈಗ ಹದಿನೈದು ರೂ. ನೀಡಿದರೆ ಯಾವುದೇ ಉಪಯೋಗವಾಗುವುದಿಲ್ಲ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಹೆಚ್ಚಳ ಆಗಿರುವುದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ದೇವರಾಜ್‌, ರೈತ

ತುಮಕೂರು ಇತರೆ ಕಡೆಗಳಿಂದ ಹುಣಸೆಹಣ್ಣನ್ನು ಖರೀದಿಸಿ ಕೊಂಡು ವ್ಯಾಪಾರ ಮಾಡುತ್ತೇವೆ. ಈ ಹಿಂದೆ ಹುಣಸೆಹಣ್ಣಿಗೆ ಹೆಚ್ಚಿನ ಬೆಲೆ ಇತ್ತು. ದಿಢೀರ್‌ ಬೆಲೆ ಕುಸಿತ ಗೊಂಡಿದೆ. ಈ ಹಿಂದೆ 120 ರೂ.ಗೆ ಹುಣಸೆಹಣ್ಣನ್ನು ವ್ಯಾಪಾರ ಮಾಡ ಲಾಗುತ್ತಿತ್ತು. ಈಗ ಬೆಲೆ ಇಳಿಕೆ ಆಗಿದೆ. ನಾಗರಾಜ್‌, ವರ್ತಕರು.

ಎಸ್‌.ಮಹೇಶ್

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.