ಕೋವಿಡ್-19 ಸೋಂಕಿನ ಮಿತ್ರರಂತೆ ವರ್ತಿಸುವ ಜಮೀರ್ ರನ್ನು ಕೂಡಲೇ ಬಂಧಿಸಬೇಕು: ಎನ್.ರವಿಕುಮಾರ್
Team Udayavani, Apr 22, 2020, 1:40 PM IST
ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಕೋವಿಡ್-19 ವೈರಾಣುವಿನ ಮಿತ್ರರಂತೆ ವರ್ತಿಸುತ್ತಿದ್ದು, ಕೂಡಲೇ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದರೆ ಅವರ ಪರವಾಗಿ ದನಿ ಎತ್ತದ ಜಮೀರ್ ಅಹಮ್ಮದ್ ಖಾನ್ ಹಲ್ಲೆ ನಡೆಸಿದವರ ಪರ ನಿಲ್ಲುತ್ತಾರೆ. ಕ್ವಾರೆಂಟೈನ್ ಮಾಡಲು ಹೋದ ಬಿಬಿಎಂಪಿ ಅಧಕಾರಿಗಳ ಮೇಲೆ ಹಲ್ಲೆ ನಡೆದರೂ ಅತ್ತ ಸುಳಿಯಲಿಲ್ಲ. ಈ ರೀತಿ ಕೋವಿಡ್-19 ವೈರಾಣುವಿನ ಮಿತ್ರರಂತೆ ವರ್ತಿಸುತ್ತಿರುವ ಜಮೀರ್ ಅಹಮ್ಮದ್ ಖಾನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು