ವಿಮೋಚನಾ ದಿನಾಚರಣೆಗೆ ಮರು ನಾಮಕರಣ ಇಕ್ಕಟ್ಟು!
Team Udayavani, Sep 12, 2019, 3:00 AM IST
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಭಾಗವನ್ನು “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ್ದರಿಂದ ಸೆ.17ರಂದು ಆಚರಿಸುತ್ತಿದ್ದ “ಹೈಕ ವಿಮೋಚನಾ ದಿನಾಚರಣೆ’ ಆಚರಿಸಬೇಕೇ ಬೇಡವೇ ಎಂಬ ಗೊಂದಲ ಏರ್ಪಟ್ಟಿದೆ. ಹೈದ್ರಾಬಾದ್ ನಿಜಾಮರಿಂದ ಮುಕ್ತಿ ಪಡೆದಿದ್ದರಿಂದ ಸ್ವಾತಂತ್ರೊತ್ಸವ ಮಾದರಿಯಲ್ಲೇ ಹೈ-ಕ ವಿಮೋಚನಾ ದಿನ ಆಚರಿಸಲಾಗುತ್ತಿತ್ತು. ಆದರೆ, ಮರು ನಾಮಕರಣದಿಂದ “ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ ಆಚರಿಸುವಂತಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಕ ವಿಮೋಚನಾ ದಿನಾಚರಣೆ ಸಮಿತಿ ಅಧ್ಯಕ್ಷ ಶಶೀಲ ನಮೋಶಿ, “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ್ದು ಸ್ವಾಗತಾರ್ಹ. ಸೆ.17ರಂದು ಈ ಬಗ್ಗೆ ಸಮಿತಿ ಸಭೆ ನಡೆಸಲಿದೆ. ನಂತರ ಸರ್ಕಾರದೊಂದಿಗೆ ಸಮಾಲೋಚನೆ ಮಾಡಲಾಗುವುದು. ಅಲ್ಲದೇ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಪ್ರತಿ ವರ್ಷವೂ ಸರ್ಕಾರದಿಂದಲೇ “ವಿಮೋಚನಾ ಉತ್ಸವ’ ಆಚರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.