ಗಲ್ಲಿ ನಾಯಕರಂತೆ ಮಾತನಾಡಬೇಡಿ, ನೀವು ಗೃಹ ಸಚಿವರು ..!
Team Udayavani, Feb 17, 2018, 11:32 AM IST
ಕಲಬುರಗಿ: ‘ಕಾಂಗ್ರೆಸ್ನ ಗಲ್ಲಿ ನಾಯಕರಂತೆ ಮಾತನಾಡಬೇಡಿ. ನೀವು ರಾಜ್ಯದ ಗೃಹ ಸಚಿವರು ಎನ್ನುವುದು ನೆನಪಿರಲಿ’ ಎಂದು ಕೇಂದ್ರ ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೆಂಡ ಕಾರಿದ ಜೋಷಿ ‘ಗೃಹ ಸಚಿವರು ಬೇಜವಾಬ್ಧಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾಕತ್ ಇದ್ದರೆ ಎಸ್ಡಿಪಿಐ ಮತ್ತು ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪತ್ರ ಬರೆಯಲಿ’ ಎಂದು ಸವಾಲು ಹಾಕಿದರು.
‘ರಾಹುಲ್ ಗಾಂಧಿ ಕೊಡುವ ಸರ್ಟಿಫಿಕೇಟ್ ನಮಗೆ ಬೇಡ. ಅವರೊಬ್ಬ ಪಾರ್ಟ್ ಟೈಮ್ ರಾಜಕಾರಣಿ’ ಎಂದು ಕಿಡಿ ಕಾರಿದರು.