ಕುಂಭಮೇಳದಿಂದ 1.2 ಲಕ್ಷ ಕೋಟಿ ರೂ. ಆದಾಯ?
Team Udayavani, Jan 21, 2019, 12:45 AM IST
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜ.15ರಿಂದ ಆರಂಭವಾಗಿರುವ ಕುಂಭ ಮೇಳ ದಲ್ಲಿ ಈ ಬಾರಿ 1.2 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ವಾಗುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ಕುಂಭಮೇಳವು ಆಧಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ತಾಣವಾಗಿ ಮೇಲ್ನೋಟಕ್ಕೆ ಕಂಡುಬಂದರೂ ಇದಕ್ಕೆ ಸಂಬಂಧಿಸಿದ ಆರ್ಥಿಕ ಚಟು ವಟಿಕೆ ಗಳಿಂದ ಸುಮಾರು 6 ಲಕ್ಷ ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಿದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ ವರದಿ ತಿಳಿಸಿದೆ.
ಉತ್ತರಪ್ರದೇಶ ಸರಕಾರವು ಪ್ರಸಕ್ತ ಕುಂಭಮೇಳಕ್ಕೆ 4,200 ಕೋಟಿ ರೂ. ನೀಡಿದ್ದು, ಈ ಭಾರೀ ಮೊತ್ತದ ಅನುದಾನದ ಬಗ್ಗೆ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಮೇಳಕ್ಕಾಗಿ ಇಷ್ಟು ವೆಚ್ಚ ಮಾಡಿದರೂ ಬರೋಬ್ಬರಿ 1.2 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವೂ ಸೃಷ್ಟಿ ಯಾಗಲಿದೆ ಎಂಬ ವಿಚಾರ ಒಕ್ಕೂಟದ ವರದಿಯಿಂದ ಹೊರಬಿದ್ದಿದೆ.
ಆತಿಥ್ಯ ಕ್ಷೇತ್ರದಲ್ಲಿ 2.5 ಲಕ್ಷ , ಏರ್ಲೈನ್ಸ್ ಮತ್ತು ವಿಮಾನನಿಲ್ದಾಣಗಳಲ್ಲಿ 1.50 ಲಕ್ಷ , 45 ಸಾವಿರ ಪ್ರವಾಸಿ ಆಪರೇಟರ್ಗಳು, ಪರಿಸರ- ಪ್ರವಾ ಸೋದ್ಯಮ, ವೈದ್ಯಕೀಯ ಪ್ರವಾ ಸೋದ್ಯಮದಲ್ಲಿ 85 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸ ಲಾಗಿದೆ ಎಂದು ಸಿಐಐ ವರದಿ ಹೇಳಿದೆ.
ಯಾವ ದೇಶಗಳ ಪ್ರವಾಸಿಗರು ಭಾಗಿ?
ಆಸ್ಟ್ರೇಲಿಯ, ಯು.ಕೆ., ಕೆನಡಾ, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಮಾರಿಷಸ್, ಜಿಂಬಾಬ್ವೆ, ಶ್ರೀಲಂಕಾ ಇತ್ಯಾದಿ.
ಕುಂಭಮೇಳಕ್ಕೆ ಉ. ಪ್ರದೇಶ ಸರಕಾರ ನೀಡಿದ ಹಣ 4,200 ಕೋಟಿ ರೂ.
ನಿರೀಕ್ಷಿತ ಆದಾಯದ ಮೊತ್ತ 1.2 ಲಕ್ಷ ಕೋಟಿ ರೂ.
2013ರಲ್ಲಿ ಅಖೀಲೇಶ್ ನೇತೃತ್ವದ ಎಸ್ಪಿ ಸರಕಾರ ನೀಡಿದ್ದ ಹಣ 1,300 ಕೋಟಿ ರೂ.
ಆಗ ಸಂಗ್ರಹವಾಗಿದ್ದ ಒಟ್ಟು ಆದಾಯದ ಅಂದಾಜು 12,000 ಕೋಟಿ ರೂ.
ಪ್ರಸಕ್ತ ಕುಂಭಮೇಳದ ನಿರೀಕ್ಷಿತ ಯಾತ್ರಿಗಳ ಸಂಖ್ಯೆ12 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ