ಸಿಎಂ, ಸ್ಪೀಕರ್ಗೆ ಎಸ್.ಮೂರ್ತಿ ಪತ್ರ
Team Udayavani, Aug 15, 2019, 3:00 AM IST
ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಕಾನೂನು ಬಾಹಿರವಾಗಿ ತಮ್ಮನ್ನು ಅಮಾನತು ಮಾಡಲಾಗಿದೆ ಎಂದು ಅಮಾನತುಗೊಂಡಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿಯವರು ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆಯ ವಿಶೇಷ ಮಂಡಳಿಯ ಅನುಮೋದನೆ ಇಲ್ಲದಿದ್ದರೂ ತಮ್ಮನ್ನು ಅಮಾನತು ಮಾಡಲಾಗಿದೆ.
ಇದು ಕಾನೂನು ಬಾಹಿರ. ಹೀಗಾಗಿ, ತಮ್ಮ ವಿರುದ್ಧ ಹೊರಡಿಸಿರುವ ದೋಷಾರೋಪಣಾ ಪಟ್ಟಿಯನ್ನು ರದ್ದುಪಡಿಸಬೇಕು. ಅಮಾನತು ಅವಧಿ ಆರು ತಿಂಗಳು ಮುಗಿದಿರುವುದರಿಂದ ಮತ್ತೆ ಸೇವೆಗೆ ಹಾಜರಾಗಲು ಅನುಕೂಲವಾಗುವಂತೆ ಪುನರ್ ನೇಮಕ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. 2016ರ ಬೆಳಗಾವಿ ಅಧಿವೇಶನಕ್ಕೆ 20.55 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 10.75 ಲಕ್ಷ ರೂ. ವೆಚ್ಚ ಮಾಡಿ 1,79 ಕೋಟಿ ರೂ.ಉಳಿಸಿದ್ದೇನೆ.
2017 ರಲ್ಲಿ 29.39 ಕೋಟಿ ರೂ. ಬಿಡುಗೆಡೆಯಾಗಿದ್ದು 24.94 ಕೋಟಿ ರೂ. ವೆಚ್ಚ ಮಾಡಿ 4.44 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಆದರೆ, ಇದನ್ನು ಮರೆಮಾಚಿ ಅವ್ಯವಹಾರ ಆರೋಪ ಮಾಡಲಾಗಿದೆ. ಹಿಂದಿನ ಸಭಾಧ್ಯಕ್ಷರ ಆದೇಶ ಸೂಚನೆಗಳನ್ವಯವೇ ಎಲ್ಲ ವೆಚ್ಚ ಮಾಡಲಾಗಿದೆ. ಸಿಎಜಿ ಸಹ ವೆಚ್ಚಗಳಿಗೆ ಲೆಕ್ಕ ಪರಿಶೋಧನೆ ಮಾಡಿದೆಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ